ಹಾಗೂ ಪ್ರಾಮಾಣಿಕತೆಯಿಂದ ದುಡಿದರೆ ಸತ#ಲದೊಂದಿಗೆ ಯಶಸ್ಸು ಲಭಿಸಲಿದೆ ಎಂದು ಉಡುಪಿ ಧರ್ಮ
ಪ್ರಾಂತದ ಬಿಷಪ್ ರೈ| ರೆ| ಜೆರಾಲ್ಡ್ ಐಸಾಕ್ ಲೋಬೊ ಅವರು ಕ್ರೈಸ್ತ ಉದ್ಯಮಿಗಳಿಗೆ ಕರೆ ನೀಡಿದರು.
Advertisement
ಕಡಿಯಾಳಿಯ ಮಾಂಡವಿ ಸಭಾಭವನದಲ್ಲಿ ರವಿವಾರ ನಡೆದ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ , ಕೆಥೋಲಿಕ್ ಸಭೆ ಉಡುಪಿ ಪ್ರದೇಶ್ ಆಯೋಜಿಸಿದ ಪ್ರೇರಣ-ಕ್ರೈಸ್ತ ಉದ್ಯಮಿಗಳ ಸಹಮಿಲನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಆದಾಯ ತೆರಿಗೆ ಇಲಾಖೆ ಉಡುಪಿಯ ಜಂಟಿ ನಿರ್ದೇಶಕ ಎ.ಇ.ಎಫ್. ದುಕೊರಿಯ, ಮಂಗಳೂರಿನ ಆದಾಯ ತೆರಿಗೆ ಅಧಿಕಾರಿ ನತಾಲಿಯಾ ಹೆಲೆನ್ ಲೋಬೊ, ಜಿಲ್ಲಾ ಸಣ್ಣ ಕೈಗಾರಿಕೆ ಸಂಘಟನೆ ಅಧ್ಯಕ್ಷ ಐ.ಆರ್. ಫೆರ್ನಾಂಡಿಸ್, ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಾಲ್ಟರ್ ಸಾಲ್ಡಾನ ಉಪಸ್ಥಿತರಿದ್ದರು. ಸಮ್ಮಾನ-ಪ್ರಶಸ್ತಿ ಪ್ರದಾನ
ಸಮಾಜ ಸೇವಕ, ಹ್ಯೂಮ್ಯಾನಿಟಿ ಸಂಸ್ಥೆಯ ಅಧ್ಯಕ್ಷ ರೋಶನ್ ಬೆಳ್ಮಣ್ ಅವರನ್ನು ಸಮ್ಮಾನಿಸಲಾಯಿತು. ಜೋಯಲ್ ವಿವಿಯನ್ ಮಥಾಯಸ್ ಕಾರ್ಕಳ ಅವರಿಗೆ “ಪ್ರೇರಣ-ಯುವ ಉದ್ಯಮಿ’, ಶರ್ಮಿಳಾ ಬಥೆಲ್ಲೊ ಕುಂದಾಪುರ ಅವರಿಗೆ “ಪ್ರೇರಣ-ಮಹಿಳಾ ಉದ್ಯಮಿ’, ಜೋನ್ ಆರ್. ಡಿ’ಸಿಲ್ವಾ ಕಾರ್ಕಳ ಅವರಿಗೆ “ಪ್ರೇರಣ-ಉದ್ಯಮಿ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
Related Articles
Advertisement