Advertisement

ಆರ್‌ಟಿಇ ಶುಲ್ಕ ಮರು ಪಾವತಿಗೆ ಕ್ರಿಯಾ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆ

07:40 PM Oct 05, 2022 | Team Udayavani |

ಬೆಂಗಳೂರು: 2019-20ನೇ ಸಾಲಿನಿಂದ 2021-22ನೇ ಸಾಲಿನ ಆರ್‌ಟಿಇ ಶುಲ್ಕ ಮರುಪಾವತಿ ಬಾಕಿ ಇರುವ ಶಾಲೆಗಳಿಗೆ ಏಕ ರೂಪದಲ್ಲಿ ತ್ವರಿತವಾಗಿ ಶುಲ್ಕ ಪಾವತಿಸಲು ಶಿಕ್ಷಣ ಇಲಾಖೆಯು “ವಿಶೇಷ ಕಾಲಮಿತಿ ಕ್ರಿಯಾ ಯೋಜನೆ-2022′ ರೂಪಿಸಿದೆ.

Advertisement

ಇದಕ್ಕಾಗಿ ತಂತ್ರಾಂಶ ಬಿಡುಗಡೆ ಮಾಡಿದ್ದು, ಅ.31ರೊಳಗೆ ಅರ್ಜಿ ಸಲ್ಲಿಸಲು ಖಾಸಗಿ ಶಾಲೆಗಳಿಗೆ ಸೂಚಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಆಯಾ ಶೈಕ್ಷಣಿಕ ವರ್ಷಗಳಲ್ಲಿಯೇ ತಂತ್ರಾಂಶವನ್ನು ಬಿಡುಗಡೆ ಮಾಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ 2022-23ನೇ ಶೈಕ್ಷಣಿಕ ವರ್ಷ ನಡೆಯುತ್ತಿದ್ದು, ಶುಲ್ಕ ಮರುಪಾವತಿ ಪ್ರಕ್ರಿಯೆಯು ಆಯುಕ್ತರು, ಡಿಡಿಪಿಐ ಮತ್ತು ಬಿಇಒಗಳ ಹಂತದಲ್ಲಿ ನಡೆಯುತ್ತಿದೆ.

ಹೀಗಾಗಿ ಪ್ರಕ್ರಿಯೆ ಕುಂಠಿತವಾಗಿದೆ. ಬಾಕಿ ಇರುವ ಶುಲ್ಕವನ್ನು ಮಂಜೂರು ಮಾಡುವುದಕ್ಕಾಗಿ ವಿಶೇಷ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಪ್ರಾಥಮಿಕ ಶಾಲಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next