Advertisement

ಚಿತ್ರೀಕರಣ ಶುರು ಮಾಡಿದ ‘ಎಜುಕೇಟೆಡ್‌ ಬುಲ್ಸ್‌’

01:08 PM Jun 20, 2023 | Team Udayavani |

ಈ ಹಿಂದೆ “ಜಯಭೇರಿ’, “ರಣಚಂಡಿ’ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಜಿ. ಕೆ. ಮುದ್ದುರಾಜ್‌ ಹಲವು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿ ಬಂದಿದ್ದಾರೆ. ಈ ಬಾರಿ ಜಿ. ಕೆ ಮುದ್ದುರಾಜ್‌ “ಎಜುಕೇಟೆಡ್‌ ಬುಲ್ಸ್’ ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ.

Advertisement

ಇತ್ತೀಚೆಗೆ “ಎಜುಕೇಟೆಡ್‌ ಬುಲ್ಸ್’ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ ನೆರವೇರಿತು. ನಿರ್ಮಾಪಕ ಭಾ. ಮ. ಗಿರೀಶ್‌ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫ‌ಲಕ ತೋರಿಸಿದರೆ, ಗೀತ ಸಾಹಿತಿ ಮತ್ತು ನಿರ್ದೇಶಕ ಡಾ. ವಿ. ನಾಗೇಂದ್ರಪ್ರಸಾದ್‌ ಕ್ಯಾಮೆರಾ ಆನ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. “ಒಡೆಯರ್‌ ಎಂಟರ್‌ಟೈನ್ಮೆಂಟ್‌’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ “ಎಜುಕೇಟೆಡ್‌ ಬುಲ್ಸ್‌’ ಸಿನಿಮಾದಲ್ಲಿ ತನುಷ್‌, ಯಶಸ್‌ ಅಭಿ, ರಾಕೇಶ್‌ ಚಂದ್ರ, ಹರ್ಷಿಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ನಿರ್ದೇಶಕ ಜಿ. ಕೆ ಮುದ್ದುರಾಜ್‌ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ “ಎಜುಕೇಟೆಡ್‌ ಬುಲ್ಸ್‌’ ಚಿತ್ರಕ್ಕೆ ಜಗದೀಶ್‌ ಸಂಭಾಷಣೆಯಿದೆ. ಚಿತ್ರಕ್ಕೆ ರಾಘವೇಂದ್ರ ಛಾಯಾಗ್ರಹಣ, ಸಂಜೀವ್‌ ರೆಡ್ಡಿ ಸಂಕಲನ, ಬಾಬು ಖಾನ್‌ ಕಲಾ ನಿರ್ದೇಶನ, ಥ್ರಿಲ್ಲರ್‌ ಮಂಜು ಸಾಹಸ ಸಂಯೋಜನೆಯಿದೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡಿರುವ “ಎಜುಕೇಟೆಡ್‌ ಬುಲ್ಸ್‌’ ಸಿನಿಮಾವನ್ನು ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಸುಮಾರು ನಲವತ್ತು ದಿನಗಳ ಚಿತ್ರೀಕರಣ ನಡೆ ಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next