Advertisement

ಮತ್ತೆ ಒಂದಾದ ಪಂಚರಂಗಿ ಜೋಡಿ

05:18 PM Sep 21, 2022 | Team Udayavani |

ಇತ್ತೀಚೆಗಷ್ಟೇ “ಗಾಳಿಪಟ-2′ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದ ನಟ ದಿಗಂತ್‌ಸದ್ಯ “ಬ್ಯಾಚುಲರ್‌ ಪಾರ್ಟಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ನಡುವೆಯೇ ದಿಗಂತ್‌ ನಾಯಕನಾಗಿ ಅಭಿನಯಿಸುತ್ತಿರುವ ಮತ್ತೂಂದು ಸಿನಿಮಾ “ಎಡಗೈ ಅಪಘಾತಕ್ಕೆ ಕಾರಣ’ ಇತ್ತೀಚೆಗಷ್ಟೇ ಸರಳವಾಗಿ ಮುಹೂರ್ತವನ್ನು ನೆರವೇರಿಸಿಕೊಂಡಿದ್ದು, ಇದೀಗ ಚಿತ್ರತಂಡ ಭರದಿಂದ ಚಿತ್ರೀಕರಣದ ಕೆಲಸಗಳಿಗೆ ಚಾಲನೆ ನೀಡಿದೆ.

Advertisement

ಸದ್ಯ ಚಿತ್ರೀಕರಣದಲ್ಲಿ ನಿರತವಾಗಿರುವ “ಎಡಗೈ ಅಪಘಾತಕ್ಕೆ ಕಾರಣ’ ಚಿತ್ರತಂಡದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಈ ಸಿನಿಮಾದಲ್ಲಿ ನಾಯಕ ನಟ ದಿಗಂತ್‌ ಅವರಿಗೆ ನಾಯಕಿಯಾಗಿ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹಿಟ್‌ ಸಿನಿಮಾ “ಪಂಚರಂಗಿ’ಯಲ್ಲಿ ದಿಗಂತ್‌ ಹಾಗೂ ನಿಧಿ ಸುಬ್ಬಯ್ಯ ಜೋಡಿ ಮೋಡಿ ಮಾಡಿತ್ತು. “ಪಂಚರಂಗಿ’ ಸಿನಿಮಾದ ಮೂಲಕ ಬ್ರೇಕ್‌ ಪಡೆದಿದ್ದ ಮತ್ತೆ ಒಂದಾದ ಪಂಚರಂಗಿ ಜೋಡಿ ಈ ಜೋಡಿ ನಂತರ ಯಾವುದೇ ಸಿನಿಮಾದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಸುಮಾರು ಎಂಟು ವರ್ಷದ ಬಳಿಕ ಮತ್ತೂಮ್ಮೆ ದಿಗಂತ್‌ ಮತ್ತು ನಿಧಿ ಸುಬ್ಬಯ್ಯ “ಎಡಗೈ ಅಪಫಾತಕ್ಕೆ ಕಾರಣ’ ಸಿನಿಮಾದಲ್ಲಿ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

ಇನ್ನು ಸಮರ್ಥ್ ಕಡ್ಕೊàಳ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಗುರುದತ್‌ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ “ಎಡಗೈ ಅಪಫಾತಕ್ಕೆ ಕಾರಣ’ ಸಿನಿಮಾದಲ್ಲಿ ದಿಗಂತ್‌ ಮತ್ತು ನಿಧಿ ಸುಬ್ಬಯ್ಯ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯನ್ನಷ್ಟೇ ಬಿಟ್ಟುಕೊಟ್ಟಿರುವ ಚಿತ್ರತಂಡ, ಸಿನಿಮಾದಲ್ಲಿ ನಿಧಿ ಅವರ ಪಾತ್ರದ ಬಗ್ಗೆ ಹೆಚ್ಚೇನು ಗುಟ್ಟುಬಿಟ್ಟು ಕೊಟ್ಟಿಲ್ಲ.

“ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ದಿಗಂತ್‌ಗೆ ಮತ್ತೂಬ್ಬ ನಾಯಕಿಯಾಗಿ ಧನು ಹರ್ಷ ನಟಿಸುತ್ತಿದ್ದಾರೆ.

Advertisement

ಸದ್ಯ ಬೆಂಗಳೂರು ಸುತ್ತಮುತ್ತ “ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರಕ್ಕೆ ಅಭಿಮನ್ಯು ಸದಾನಂದ್‌ ಛಾಯಾಗ್ರಹಣ, ರಾಹುಲ್‌ ವಿ ಪಾರ್ತವಿಕರ್‌ ಹಾಗೂ ಶ್ರೀಪಾದ್‌ ಜೋಶಿ ಸಂಭಾಷಣೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next