Advertisement

ED; ದಿಲ್ಲಿ ಅಬಕಾರಿ ನೀತಿ ಹಗರಣ: 9ನೇ ಆರೋಪಪಟ್ಟಿ ಸಲ್ಲಿಕೆ

01:09 AM Jun 29, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.) ಶುಕ್ರವಾರ ದಿಲ್ಲಿ ಕೋರ್ಟ್‌ಗೆ ಹೊಸ ಹಾಗೂ 9ನೇ ಅರೋಪಪಟ್ಟಿಯನ್ನು ಸಲ್ಲಿಸಿದ್ದು, ಅದರಲ್ಲಿ ವಿನೋದ್‌ ಚೌಹಾಣ್‌ ಎಂಬ ವ್ಯಕ್ತಿಯನ್ನು ಆರೋಪಿ ಎಂದು ಹೆಸ ರಿ ಸಿದೆ. ಹಗರಣದ ತನಿಖೆಯ ಭಾಗವಾಗಿ ವಿನೋದ್‌ ಚೌಹಾಣ್‌ರನ್ನು ಮೇ ತಿಂಗಳಲ್ಲಿ ಬಂಧಿಸಲಾಗಿತ್ತು. ವರದಿಗಳ ಪ್ರಕಾರ ಅಕ್ರಮ ಹಣ ವರ್ಗಾವಣೆ(ತಡೆ) ಕಾಯ್ದೆ ಅನ್ವಯ ಈ ಹೊಸ ಹಾಗೂ 9ನೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹಗರಣದ ಪ್ರಮುಖ ಆರೋಪಿ ಕವಿತಾ ಬಂಧನಕ್ಕೆ ಸಂಬಂಧಿ ಸಿದಂತೆ ವಿನೋದ್‌ ಪಾತ್ರವಿದ್ದು, ಕವಿತಾ ಅವರ ಸಹಾಯಕ ನೊಬ್ಬ, ಅಭಿಶೇಕ್‌ ಬೊಯಿನ್‌ಪಳ್ಳಿ ಅವರ ಆದೇಶದ ಮೇರೆಗೆ ಆರೋಪಿ ದಿನೇಶ್‌ ಅರೋರಾ ಕಚೇರಿ ಯಿಂದ ಹಣ ತುಂಬಿದ್ದ 2 ಬ್ಯಾಗ್‌ಗಳನ್ನು ಕೊಂಡೊಯ್ದು ವಿನೋದ್‌ ಚೌಹಾಣ್‌ಗೆ ತಲುಪಿಸಿರುವುದಾಗಿ ಸ್ವತಃ ಸಹಾಯಕ ಹೇಳಿದ್ದಾನೆ ಎಂದು ಇ.ಡಿ. ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next