Advertisement
ಡಿಕೆ ಶಿವಕುಮಾರ್, ನವದೆಹಲಿ ಕರ್ನಾಟಕ ಭವನದ ಉದ್ಯೋಗಿ ಹನುಮಯ್ಯ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ ಎ) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಿವರಿಸಿದೆ.
Related Articles
Advertisement
ಕಲೆ ಹಾಕಿರುವ ಸಾಕ್ಷ್ಯಾಧಾರಗಳ ಪ್ರಕಾರ, ಆರೋಪಿ ನಂಬರ್ ಒಂದು(ಡಿಕೆಶಿ) ದೆಹಲಿ, ಬೆಂಗಳೂರಿನಲ್ಲಿ ಬೃಹತ್ ನೆಟ್ ವರ್ಕ್ ಗಳ ಮೂಲಕ ಅಕ್ರಮ ಹಣವನ್ನು ಹವಾಲಾ ಮೂಲಕ ವರ್ಗಾಯಿಸಿರುವುದಾಗಿ ದೂರಿದೆ. ಇದರಲ್ಲಿ ಸಚಿನ್ ನಾರಾಯಣ್, ಆಂಜನೇಯ ಹನುಮಂತಯ್ಯ ಮತ್ತು ಎನ್ ರಾಜೇಂದ್ರ ಇತರ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದೆ.
ಆದಾಯ ತೆರಿಗೆ ಇಲಾಖೆ ಪ್ರಕಾರ, ನಾರಾಯಣ್ ಕಾಂಗ್ರೆಸ್ ಮುಖಂಡ ಡಿಕೆಶಿ ಹಾಗೂ ಶರ್ಮಾನ ವ್ಯವಹಾರದ ಪಾಲುದಾರರು. ಶರ್ಮಾ ಟ್ರಾನ್ಸ್ ಪೋರ್ಟ್ ಮೂಲಕ ಲಕ್ಸುರಿ ಪ್ರಯಾಣಿಕರ ಬಸ್ ಗಳನ್ನು ನಡೆಸುತ್ತಿದ್ದಾರೆ.
ಹನುಮಂತಯ್ಯ ನವದೆಹಲಿ ಕರ್ನಾಟಕ ಭವದ ಉದ್ಯೋಗಿ. ನವದೆಹಲಿಯಲ್ಲಿರುವ ಡಿಕೆಶಿ ನಿವಾಸದಲ್ಲಿದ್ದ ಅಕ್ರಮ ಹಣವನ್ನು ಸಂಗ್ರಹಿಸಿ ಇಡುವ ಜವಾಬ್ದಾರಿ ಹೊತ್ತಿರುವುದಾಗಿ ಇಲಾಖೆ ದೂರಿನಲ್ಲಿ ಆರೋಪಿಸಿದೆ. ಐದು ಮಂದಿ ಆರೋಪಿಗಳು ತೆರಿಗೆಯನ್ನು ವಂಚಿಸುವ ಸಂಚು ನಡೆಸಿರುವುದಾಗಿ ತಿಳಿಸಿದೆ.