ಹೆಚ್ಚಳವಾಗಿದೆ ಎಂದು 2017-18ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. 2017-18 ನೇ ಸಾಲಿನಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ದರ 8.5 ರಷ್ಟು ನಿರೀಕ್ಷೆ ಮಾಡಲಾಗಿದೆ. ಕೃಷಿ ವಲಯದ ಬೆಳವಣಿಗೆ ಶೇಕಡಾ 4.9 ರಷ್ಟು ಗುರಿ ಹೊಂದಲಾಗಿದ್ದು, ಕೈಗಾರಿಕಾ ವಲಯದಲ್ಲಿಯೂ ಏರಿಕೆ ಕಾಣುವ ನಿರೀಕ್ಷೆ ಹೊಂದಲಾಗಿದೆ. ಸೇವಾ ವಲಯದ ಬೆಳವಣಿಗೆ ಶೇಕಡಾ 10.4 ರಷ್ಟು ಏರಿಕೆ ಅಂದಾಜಿಸಲಾಗಿದ್ದು, ಸಾರ್ವಜನಿಕ ಆಡಳಿತ ಶೇಕಡಾ 16.5 ರಷ್ಟು ಏರಿಕೆಯಾಗುವ ನಿರೀಕ್ಷೆ ಹೊಂದಲಾಗಿದೆ. ಇತರ ಸೇವೆಗಳ ಬೆಳವಣಿಗೆ ದರ ಶೇಕಡಾ 10.5 ರಷ್ಟು ಏರಿಕೆಯ ನಿರೀಕ್ಷೆ ಇದ್ದು, ರಾಜ್ಯದ ತಲಾ ಆದಾಯ ಶೇಕಡಾ 10.9 ರಷ್ಟು
ಹೆಚ್ಚಳವಾಗುವುದೆಂದು ಅಂದಾಜಿಸಲಾಗಿದ್ದು, ತಲಾ ಆದಾಯ 1.58 ಲಕ್ಷದಿಂದ 1.74 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷಾ ವರದಿಯಲ್ಲಿ ಉಲ್ಲೇಖೀಸಲಾಗಿದೆ. ರಾಜ್ಯದಲ್ಲಿನ ಆದಾಯ ಕೊರತೆಯಲ್ಲಿನ ಬಿಗಿ ಹಿಡಿತ ಆರ್ಥಿಕ ಸಾಮರ್ಥ್ಯವನ್ನು ಬಲಿಷ್ಠಗೊಳಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Advertisement
ಹೆಚ್ಚುವರಿ ನಿರೀಕ್ಷೆಜಿಎಸ್ಟಿ ಜಾರಿ ಹೊರತಾಗಿಯೂ ಪ್ರಸಕ್ತ ವರ್ಷ ವಾಣಿಜ್ಯ ತೆರಿಗೆ ಗುರಿಯ 55 ಸಾವಿರ ಕೋಟಿ ರೂ. ಗಿಂತಲೂ 2,200 ಕೋಟಿ ರೂ.
ಹೆಚ್ಚು ಆದಾಯ ಸಂಗ್ರಹಿಸುವ ವಿಶ್ವಾಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಆರ್ಥಿಕ ವರ್ಷದಲ್ಲೂ ಬರೋಬ್ಬರಿ 10,800 ಕೋಟಿ ರೂ. ಗಿಂತ ಹೆಚ್ಚು ಅಂದರೆ 65,800 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.