Advertisement

ರೈತರಿಗೆ ಆರ್ಥಿಕ ಹೊಡೆತ, ವ್ಯಾಪಾರಿಗಳಿಗೆ ಸಂಕಟ

04:09 PM Oct 07, 2021 | Team Udayavani |

ಆಳಂದ: ಭರ್ಜರಿಯಾಗಿ ರಾಶಿಗೆ ಬಂದಿರುವ ಸೋಯಾಬಿನ್‌ ಬೆಳೆ ಮಳೆ ನೀರಿಗೆ ನೆನೆದು ಧಾನ್ಯವೆಲ್ಲ ಉಬ್ಬಿದ್ದರಿಂದ ರಾಶಿ ಮಾಡಿದವರು ಮಾರಾಟಕ್ಕೆ ಮುಂದಾದರೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ದೊರೆಯದೇ ಅಗ್ಗದ ದರದಲ್ಲಿ ಮಾರಾಟ ಮಾಡಿ ಕೈಸುಟ್ಟುಕೊಳ್ಳುತ್ತಿದ್ದಾರೆ.

Advertisement

ರಾಶಿ ಮಾಡಿದ ಧಾನ್ಯವು ನೀರಿಗೆ ನೆನೆದ ಪ್ರಯುಕ್ತ ಪುನಃ ಬಿಸಿಲಿಗೆ ಹಾಕಿ ಒಣಗಿಸಲು ದುಪ್ಪಟ್ಟು ಲಾಗೋಡಿ ಭರಿಸುತ್ತಿದ್ದಾರೆ. ಇತ್ತ ಬೇಗ ಮಾರಾಟ ಮಾಡಿ ಕೈತೊಳೆದುಕೊಳ್ಳಲು ಮುಂದಾದ ರೈತರಿಗೆ ನಿಮ್ಮ ಧಾನ್ಯ ಗುಣಮಟ್ಟದಿಂದ ಕೂಡಿಲ್ಲ ಎಂದು ಅಗ್ಗದ ದರದಲ್ಲಿ ಖರೀದಿಸುವ ವ್ಯಾಪಾರಿಗಳು ಸಹ ಖರೀದಿಸಿದ ಧಾನ್ಯಗಳನ್ನು ಪುನಃ ಬಿಸಿಲಿಗೆ ಹಾಕಿ ತೆಗೆಯುವುದರಲ್ಲೇ ಸುಸ್ತಾಗಿ ಕೂಲಿಯಲಾಗೋಡಿ ಭರಿಸತೊಡಿದ್ದಾರೆ.

ಆರಂಭದಲ್ಲಿಸೋಯಾಬಿನ್‌, ಉದ್ದು, ಹೆಸರು ಬೆಳೆಗೆ ಮಳೆಕೊರತೆ ಎದುರಾಗಿ ನಂತರ ಬಂದ ಮಳೆಯಿಂದ ಬೆಳೆದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ಮಳೆಯ ಕಾಟದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕೆಲವು ರೈತರ ಬೆಳೆ ಕೈಗೆ ಬಂದರೂ ನಿರೀಕ್ಷಿತ ಬೆಲೆ ಬಾರದೇ ಬೆಳೆಗೆ ಮಾಡಿದ ಲಾಗೋಡಿ ಖರ್ಚು ಕಳೆದರೆ ಬರಿಗೈಯಿಂದಲೇ ಮನೆಗೆ ಮರಳುವಂತಾಗಿದೆ¨ಎಂದು ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next