Advertisement

ಕೊಡೆ ಹಿಡಿದು ಸರಳತೆ ಮೆರೆದ ಸಚಿವ ಕೆ.ಟಿ.ರಾಮ ರಾವ್‌

07:47 PM Sep 12, 2021 | Team Udayavani |

ಹೈದರಾಬಾದ್‌: ತೆಲಂಗಾಣ ರಾಜಧಾನಿಗೆ ಹೈದರಾಬಾದ್‌ಗೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ತಮಗೆ ಕೊಡೆ ಹಿಡಿದ ಸಚಿವ ಕೆ.ಟಿ.ರಾಮ ರಾವ್‌ ಕ್ರಮವನ್ನು ಟೆಕ್‌ ಮಹೀಂದ್ರ ಎಂ.ಡಿ.ಮತ್ತು ಸಿಇಒ ಸಿ.ಪಿ.ಗುರ್ನಾನಿ ಶ್ಲಾಘಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಗುರ್ನಾನಿ “ನೀವು ನನಗೆ ಕೊಡೆ ಹಿಡಿದಿರುವುದರಿಂದ ನಾನು ಮೂಕವಿಸ್ಮಿತನಾಗಿದ್ದೇನೆ.

ನಿಮ್ಮಂಥ ವ್ಯಕ್ತಿತ್ವದವರು ಸರಳತೆ ಪ್ರದರ್ಶಿಸುವುದು ಮೆಚ್ಚುವಂಥ ವಿಚಾರ’ ಎಂದು ಬರೆದುಕೊಂಡಿದ್ದಾರೆ.

ಜತೆಗೆ ಫೋಟೋವನ್ನೂ ಅಪ್‌ಲೋಡ್‌ ಮಾಡಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡಿರುವ ಸಚಿವ ಕೆ.ಟಿ.ರಾಮ ರಾವ್‌ “ನಿಮ್ಮಿಂದ ಕಲಿಯುವುದು ತುಂಬಾ ಇದೆ’ ಎಂದು ಬರೆದುಕೊಂಡಿದ್ದಾರೆ.

ಈ ಎರಡೂ ಟ್ವೀಟ್‌ಗಳಿಗೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾದ ಅಧ್ಯಕ್ಷ ಆನಂದ್‌ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಶಾಲೆಗೆ ಹೆಣ್ಣುಮಕ್ಕಳನ್ನು ಕಳುಹಿಸುವುದಿಲ್ಲ! ಕಾರಣ?

Advertisement

Udayavani is now on Telegram. Click here to join our channel and stay updated with the latest news.

Next