Advertisement

ಆ ದಾಳಿಯ ನೋವೇ ಕರಗಿಲ್ಲ

05:50 PM Apr 21, 2020 | sudhir |

ಕೊಲೊಂಬೋ: ಕಳೆದ ವರ್ಷದ ಈಸ್ಟರ್‌ ಆಚರಣೆಯ ಸಂದರ್ಭ ಸುಮಾರು 250 ಮಂದಿಯ ಸಾವಿಗೆ ಶ್ರೀಲಂಕಾ ಸಾಕ್ಷಿಯಾಗಿತ್ತು. ಇದೀಗ ಅದರ ಆಘಾತ ಮಾಸುವ ಮುನ್ನವೇ ಕೋವಿಡ್‌ 19 ದೇಶಕ್ಕೆ ದ್ವೀಪರಾಷ್ಟ್ರಕ್ಕೆ ಅಪ್ಪಳಿಸಿದೆ.

Advertisement

ಕ್ರಿಶ್ಚಿಯನ್ನರು ಮತ್ತು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮೂರು ಬಾಂಬ್‌ಗಳನ್ನು 21 ಏಪ್ರಿಲ್‌ 2019ರಂದು ಎಸೆಯಲಾಗಿತ್ತು. ಈ ದುರ್ಘ‌ಟನೆಯಲ್ಲಿ ಅಮಾಯಕರು ಬಲಿಯಾಗಿದ್ದರು. ಚರ್ಚ್‌ಗಳಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿ ದ್ದವರ ಮೇಲೆ ಮತ್ತು ವಿಲಾಸಿ ಹೊಟೇಲ್‌ಗ‌ಳಲ್ಲಿ ತಂಗಿದ್ದವರನ್ನು ಗುರಿಯಾಗಿರಿಸಿ ಬಾಂಬ್‌ ಸ್ಫೋಟಿಸಲಾಗಿತ್ತು. 2009ರ ವರೆಗೆ ಆ ರಾಷ್ಟ್ರದಲ್ಲಿ ಹಿಂಸಾಕೃತ್ಯಗಳಿಗೆ ಕಾರಣವಾಗುತ್ತಿದ್ದ ಎಲ್‌ಟಿಟಿಇ ಉಗ್ರ ಸಂಘಟನೆಯನ್ನು ಮಟ್ಟಹಾಕಿದ ಬಳಿಕ ಇಂಥ ಘಟನೆಗಳು ನಡೆದಿರಲಿಲ್ಲ.

ಶ್ರೀಲಂಕಾ ಇತಿಹಾಸದಲ್ಲಿಯೇ ಇದು ಅತ್ಯಂತ ಭೀಕರ ದಾಳಿ ಎಂದೇ ಹೇಳಲಾಗಿತ್ತು. ಕೊಲಂಬೋದಲ್ಲಿನ ಸೈಂಟ್‌ ಆ್ಯಂಟನಿ ಚರ್ಚ್‌, ಪಶ್ಚಿಮ ಕರಾವಳಿ ನಗರ ನೆಗೊಂಬೋದಲ್ಲಿನ ಸೈಂಟ್‌ ಸೆಬಾಸ್ಟಿಯನ್‌ ಚರ್ಚ್‌, ಪೂರ್ವ ಭಾಗದ ಬಟ್ಟಿಕಲೋವಾದಲ್ಲಿನ ಮತ್ತೂಂದು ಚರ್ಚ್‌ ನಲ್ಲಿ ಏಕ ಕಾಲಕ್ಕೆ ಸ್ಫೋಟ ಸಂಭವಿಸಿತ್ತು. ಪಂಚತಾರಾ ಹೊಟೇಲ್‌ಗ‌ಳಾ ಗಿರುವ ದ ಶಾಂಗ್ರೀಲಾ, ದ ಸಿನ್ನಮಾನ್‌ ಗ್ರ್ಯಾಂಡ್‌ ಮತ್ತು ಕಿಂಗ್ಸ್‌ ಬರಿಗಳಲ್ಲಿಯೂ ಸ್ಫೋಟಗಳು ನಡೆದಿತ್ತು.

ನಾಗರಿಕ ಸಮಾಜದ ಹೆಣಗಾಟ
ರಾಜಕೀಯ ಕಾರಣಕ್ಕೆ ದೇಶದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದರೆ ಅತ್ತ ನಂಬಿಕೆ ಮತ್ತು ಸಾಮರಸ್ಯವನ್ನು ಪುನರ್‌ ಸ್ಥಾಪಿಸಲು ಶ್ರಮಿಸುತ್ತಿದ್ದ ನಾಗರಿಕ ಸಮಾಜವು ಈಗ ಹೆಣಗಾಡುತ್ತಿದೆ. ಈ ಮಧ್ಯದಲ್ಲಿ ಕೊರೊನಾ ಸಂಕಟವೂ ದೇಶವನ್ನು ಕಾಡುತ್ತಿದೆ. 2019ರ ಎಪ್ರಿಲ್‌ 21ರಂದು ನಡೆದ ಘಟನೆಯನ್ನು ಜನರು ಮರೆಯಲು ಪ್ರಯತ್ನಿಸುತ್ತಿದ್ದಾರೆ. ದಾಳಿ ಬಳಿಕ ಅಲ್ಲಿನ ಒಟ್ಟಾರೆ ಚಿತ್ರಣವೇ ಬದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next