Advertisement

ಪೂರ್ವ ವಿದರ್ಭದಲ್ಲಿ ಈ ವಾರ ಭಾರೀ ಮಳೆ; ಎಚ್ಚರಿಕೆ

01:52 PM Jan 22, 2019 | Team Udayavani |

ಮುಂಬಯಿ : ‘ಈ ವಾರ ಪೂರ್ವ ವಿದರ್ಭದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ; ಅದುದರಿಂದ ರೈತರ ತಮ್ಮ ಬೆಳೆ ರಕ್ಷಿಸಿಕೊಳ್ಳುವ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮಹಾರಾಷ್ಟ್ರ ಸರಕಾರ ಇಂದು ಮಂಗಳವಾರ ಹೊರಡಿಸಿರುವ ಪ್ರಕಟನೆಯಲ್ಲಿ ಎಚ್ಚರಿಸಿದೆ.

Advertisement

‘ವಿದರ್ಭ, ಮುಖ್ಯವಾಗಿ ಅದರ ಪೂರ್ವ ಭಾಗ, ಇದೇ ಜನವರಿ 24 ಮತ್ತು 26ರಂದು ಭಾರೀ ಮಳೆಯನ್ನು ಕಾಣುವ ನಿರೀಕ್ಷೆ ಇದೆ. ಗಡ್‌ಚಿರೋಲಿ, ಚಂದ್ರಾಪುರ, ಗೊಂಡಿಯಾ, ಭಂಡಾರಾ, ನಾಗ್ಪುರ, ಅಮರಾವತಿ, ಯವತ್‌ಮಾಲ್‌ ಮತ್ತು ವಾರ್ಧಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ‘ ಎಂಬ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next