Advertisement

ಇ-ಸ್ಟ್ಯಾಪಿಂಗ್‌ ಸೌಲಭ್ಯ ಯಶಸ್ವಿಯಾಗಲಿ: ರವೀಂದ್ರ

05:50 PM May 17, 2022 | Team Udayavani |

ಶಹಾಬಾದ: ದೈನಂದಿನ ವ್ಯವಹಾರದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಆರಂಭಿಸಿರುವ ಇ-ಸ್ಟ್ಯಾಪಿಂಗ್‌ ಸೌಲಭ್ಯ ಯಶಸ್ವಿಯಾಗಲಿ ಎಂದು ಸೇಡಂ ಸಹಕಾರ ಸಂಘದ ಸಹಾಯಕ ನಿಬಂಧಕ ರವೀಂದ್ರ ಹೇಳಿದರು.

Advertisement

ನಗರದ ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ನಿಯಮಿತದಲ್ಲಿ ಆಯೋಜಿಸಲಾಗಿದ್ದ ಇ-ಸ್ಟ್ಯಾಪಿಂಗ್‌ ಸೇವೆ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.

ಇ-ಸ್ಟ್ಯಾಪಿಂಗ್‌ ಸೇವೆ ನೀಡುವುದರಿಂದ ಸಾರ್ವಜನಿಕರಿಗೆ ದೂರದ ಜಿಲ್ಲಾ ಕೇಂದ್ರಕ್ಕೆ ತೆರಳುವುದನ್ನು ತಪ್ಪಿಸಿದಂತಾಗುತ್ತದೆ. ಅಲ್ಲದೇ ಈಗ ಸರ್ಕಾರದ ಪ್ರತಿ ವ್ಯವಹಾರಕ್ಕೂ ಇ-ಸ್ಟಾಂಪ್‌ ಅಗತ್ಯವಿದ್ದು, ಈ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳುವಂತೆ ಆಗಲಿ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಬ್ಯಾಂಕಿನ ಆರ್ಥಿಕ ಪ್ರಗತಿಯೂ ಹೆಚ್ಚುತ್ತದೆ ಎಂದರು.

ನಿವೃತ್ತ ಲೆಕ್ಕ ಪರಿಶೋಧಕ ನವಲೆ ಭಾಗಪ್ಪ ಮಾತನಾಡಿ, ಜನರಿಗೆ ಅಗತ್ಯವಿರುವ ಇ-ಸ್ಟಾಂಪ್‌ ಸೇವೆ ಸುಲಭ ರೀತಿಯಲ್ಲಿ ಸಿಗುವಂತಾಗಲಿ ಎಂದರು.

ಸುರಕ್ಷಾ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ| ಅಹ್ಮದ್‌ ಪಟೇಲ್‌ ಮಾತನಾಡಿ, ತಾಂತ್ರಿಕ ಯುಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಮಯ ಉಳಿತಾಯ, ಶೀಘ್ರದಲ್ಲೇ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಇ-ಸ್ಟಾಂಪ್‌ ಸೇವೆ ಪ್ರಾರಂಭ ಮಾಡಿದ್ದೇವೆ ಎಂದರು.

Advertisement

ಮುಖಂಡರಾದ ನಿಂಗಣ್ಣ ಸಂಗಾವಿಕರ್‌, ಇಬ್ರಹಿಂಸಾಬ್‌, ಮಲ್ಲಿಕಾರ್ಜುನ ಸ್ವಾಮಿ, ನಿಂಗಣ್ಣ ಪೂಜಾರಿ, ರಾಜು ಕಣದಾ ಳಕರ್‌, ಶರಣು ಮಡಿವಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next