Advertisement

E.D. ಬಂಧನ ಪ್ರಶ್ನಿಸಿದ್ದ ಸೊರೇನ್‌ ಅರ್ಜಿ ತಿರಸ್ಕಾರ

01:54 AM May 04, 2024 | Team Udayavani |

ರಾಂಚಿ: ಭೂ ಹಗರಣ ಸಂಬಂಧ ಬಂಧನಕ್ಕೀಡಾಗಿರುವ ಝಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ ಅವರಿಗೆ ಜಾಮೀನು ನೀಡಲು ಝಾರ್ಖಂಡ್‌ ಹೈಕೋರ್ಟ್‌ ನಿರಾಕರಿಸಿದೆ. ಅಲ್ಲದೆ ಇ.ಡಿ. ತಮ್ಮನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಸೊರೇನ್‌ ಸಲ್ಲಿಸಿದ ರಿಟ್‌ ಅರ್ಜಿಯನ್ನು ವಜಾ ಗೊಳಿಸಿದೆ. ನ್ಯಾ| ರಂಗೂನ್‌ ಮುಖ್ಯೋಪಾಧ್ಯಾಯ ನೇತೃತ್ವದ ನ್ಯಾಯಪೀಠ ಜಾಮೀನು ನಿರಾ ಕರಿಸಿದೆ. ಮೇ 6ರಂದು ನಡೆಯಲಿರುವ ಸೊರೇನ್‌ ಚಿಕ್ಕಪ್ಪ ರಾಜಾ ರಾಮ್‌ ಸೊರೇನ್‌ ಅವರ ಅಂತಿಮ ಕಾರ್ಯಗಳಲ್ಲಿ ಪೊಲೀಸರ ವಶದಲ್ಲಿರುವಂತೆಯೇ ಹೇಮಂತ್‌ ಸೊರೇನ್‌ ಭಾಗವಹಿಸಲು ಅನುಮತಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next