Advertisement

Kannada Short Movie: ದ್ವಂದ್ವಂ ದ್ವಯಂ ಹೊಸಬರ ಕಿರುಚಿತ್ರ ಪ್ರಯೋಗ

05:44 PM Mar 20, 2024 | Team Udayavani |

ಹಿರಿಯ ನಿರ್ದೇಶಕ ಮತ್ತು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರ “ಟೆಂಟ್‌ ಸ್ಕೂಲ್‌ ಆಫ್ ಸಿನಿಮಾ’ದಲ್ಲಿ ಕಾರ್ಯಗಾರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮನ್‌ ಚಂಗಪ್ಪ ನಿರ್ದೇಶಿಸಿರುವ “ದ್ವಂದ್ವಂ ದ್ವಯಂ’ ಕಿರುಚಿತ್ರದ ಪ್ರದರ್ಶನ ಹಾಗೂ ಸಂವಾದ ಇತ್ತೀಚೆಗೆ ನಡೆಯಿತು.

Advertisement

ಸುಮಾರು ಹದಿನೇಳು ನಿಮಿಷಗಳ ಅವಧಿಯ “ದ್ವಂದ್ವಂ ದ್ವಯಂ’ ಕಿರುಚಿತ್ರದಲ್ಲಿ ಮರಣದಂಡನೆಗೆ ಮುನ್ನ ಜೈಲು ಖೈದಿಯೊಬ್ಬನ ಕೊನೆಯ ರಾತ್ರಿಯಲ್ಲಿ ಆತನ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿರುವ ಸಂಕೀರ್ಣತೆಗಳನ್ನು ಆಳವಾಗಿ ಪರಿಶೋಧಿಸುವ ಪ್ರಯತ್ನವನ್ನು ಮಾಡಲಾಗಿದೆ.

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ಡಾ. ನಾದ ಶೆಟ್ಟಿ, ಅಶೋಕ್‌ ಕಶ್ಯಪ್‌, ಅನೂಪ್‌ ಭಂಡಾರಿ, ಚಂಪಾ ಶೆಟ್ಟಿ ಮತ್ತಿತರರು “ದ್ವಂದ್ವಂ ದ್ವಯಂ’ ಕಿರುಚಿತ್ರದ ಪ್ರದರ್ಶನ ಮತ್ತು ಸಂವಾದದಲ್ಲಿ ಆಗಮಿಸಿ, ಕಿರುಚಿತ್ರವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next