Advertisement

ಶಿವಾಜಿ ಪಾರ್ಕ್ ನಲ್ಲಿ ದಸರಾ ರ್‍ಯಾಲಿ: ಉದ್ಧವ್ ಠಾಕ್ರೆ ಬಣಕ್ಕೆ ಹೈಕೋರ್ಟ್ ಅನುಮತಿ

05:59 PM Sep 23, 2022 | Team Udayavani |

ಮುಂಬಯಿ : ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಅಕ್ಟೋಬರ್ 5 ರಂದು ಸೆಂಟ್ರಲ್ ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್ ಮೈದಾನದಲ್ಲಿ ವಾರ್ಷಿಕ ದಸರಾ ರ್‍ಯಾಲಿಯನ್ನು ನಡೆಸಲು ಬಾಂಬೆ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

Advertisement

ಇದನ್ನೂ ಓದಿ: 2024ರಲ್ಲಿ ಲಾಲು-ನಿತೀಶ್ ಜೋಡಿ ನಿರ್ನಾಮ: ಬಿಹಾರದಲ್ಲಿ ಗುಡುಗಿದ ಅಮಿತ್ ಶಾ

ಠಾಕ್ರೆ ನೇತೃತ್ವದ ಸೇನಾ ಬಣ ಮತ್ತು ಅದರ ಕಾರ್ಯದರ್ಶಿ ಅನಿಲ್ ದೇಸಾಯಿ ಅವರು ಅನುಮತಿ ನಿರಾಕರಿಸಿದ ಮುಂಬೈ ನಾಗರಿಕ ಸಂಸ್ಥೆಯ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಆರ್.ಡಿ.ಧನುಕಾ ಮತ್ತು ಕಮಲ್ ಖಾತಾ ಅವರ ವಿಭಾಗೀಯ ಪೀಠವು ಅಂಗೀಕರಿಸಿತು. ಬಿಎಂಸಿ ಆದೇಶವು “ಕಾನೂನಿನ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಮತ್ತು ವಿಶ್ವಾಸಾರ್ಹತೆ” ಎಂದು ನ್ಯಾಯಾಲಯ ಹೇಳಿದೆ.

ಪೀಠವು ಠಾಕ್ರೆ ನೇತೃತ್ವದ ಸೇನೆಗೆ ಅಕ್ಟೋಬರ್ 2 ರಿಂದ 6 ರವರೆಗೆ ಮೈದಾನವನ್ನು ಬಳಸಲು ಅನುಮತಿ ನೀಡಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಕೇಳಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪ್ರತಿಸ್ಪರ್ಧಿ ಶಿವಸೇನಾ ಬಣದ ಶಾಸಕ ಸದಾ ಸರ್ವಾಂಕರ್ ಅವರು ಇದೇ ರೀತಿಯ ಅರ್ಜಿ ಸಲ್ಲಿಸಿದ್ದರಿಂದ ಅನುಮತಿ ನಿರಾಕರಿಸುತ್ತಿರುವುದಾಗಿ ಸೆಪ್ಟೆಂಬರ್ 21 ರಂದು ಬಿಎಂಸಿ ಹೇಳಿತ್ತು ಒಂದು ಬಣಕ್ಕೆ ಅನುಮತಿ ನೀಡಿದರೆ ಅದು ಕಾನೂನು ಸಮಸ್ಯೆಗೆ ಕಾರಣವಾಗುತ್ತದೆ ಎಂದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next