Advertisement

ಚೆಕ್‌ಗೆ ನಕಲಿ ಸಹಿ ಬಳಸಿ 2.50 ಕೋಟಿ ರೂ. ವಂಚಿಸಲೆತ್ನಿಸಿದ ಇಬ್ಬರ ಬಂಧನ

01:57 PM Aug 20, 2021 | Team Udayavani |

ಧಾರವಾಡ: ಕಂಪನಿಯೊಂದರ ಚೆಕ್‌ಗೆ ನಕಲಿ ಸಹಿ ಬಳಸಿ ಬ್ಯಾಂಕ್‌ನಿಂದ ಹಣ ಪಡೆಯಲು ಯತ್ನಿಸಿದ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಭಾಗ ನಿವಾಸಿ ಯುವರಾಜ್‌ ಬಿರಾದಾರ ಸೇರಿದಂತೆ ಇಬ್ಬರು ಸಿಕ್ಕಿಬಿದ್ದವರು.

Advertisement

ನಗರದ ಎನ್‌ಟಿಟಿಎಫ್‌ ಬಳಿಯ ಎಚ್‌ಡಿಎಫ್‌ಸಿ ಬ್ಯಾಂಕ್‌ ಶಾಖೆಯಲ್ಲಿ ಕಂಪನಿಯೊಂದರ ಚೆಕ್‌ಗೆ ನಕಲಿ ಸಹಿ ಬಳಸಿ 2.50 ಕೋಟಿ ಹಣ ಪಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಹಿ ಬಗ್ಗೆ ಸಂಶಯಗೊಂಡ ಬ್ಯಾಂಕ್‌ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ಕೈಗೊಂಡಾಗ ನಕಲಿ ಸಹಿ ಮಾಡಿ ಹಣ ದೋಚುವ ಸಂಚು ಬಯಲಾಗಿದೆ.

ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬೈಕ್‌ನಿಂದ ಬಿದ್ದು ಸಾವು: ಬೈಕ್‌ ನಿಯಂತ್ರಣ ತಪ್ಪಿ ಫುಟ್‌ಪಾತ್‌ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಮಾಡರ್ನ್ ಹಾಲ್‌ ಬಳಿ ನಡೆದಿದೆ. ವಿಜಯಪುರದ ಮಹೇಶ ಭಜಂತ್ರಿ ಮೃತಪಟ್ಟವ. ಐಎಎಸ್‌ ಪರೀಕ್ಷೆಗೆ ತರಬೇತಿ ಪಡೆಯಲು ನಗರದಲ್ಲಿ ನೆಲೆಸಿದ್ದ ಈತ, ಬೈಕ್‌ನಲ್ಲಿ ರೂಮ್‌ನತ್ತ ಹೊರಟಾಗ ಅಪಘಾತ ಸಂಭವಿಸಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next