Advertisement

ನಕಲಿ ದಾಖಲೆ: ವಿದ್ಯಾರ್ಥಿಗಳು ಅತಂತ್ರ

08:58 PM Jun 08, 2023 | Team Udayavani |

ಒಟ್ಟಾವಾ: ಉನ್ನತ ಶಿಕ್ಷಣದ ಕನಸು ಹೊತ್ತು ಕೆನಡಾಗೆ ಬಂದಿರುವ ಪಂಜಾಬ್‌ನ ಸುಮಾರು 700 ವಿದ್ಯಾರ್ಥಿಗಳ ಭವಿಷ್ಯ ಈಗ ಡೋಲಾಯಮಾನವಾಗಿದೆ. ಪಂಜಾಬ್‌ನ ಜಲಂಧರ್‌ನಲ್ಲಿರುವ ಕೆಲವು ಏಜೆಂಟ್‌ಗಳು ಈ ವಿದ್ಯಾರ್ಥಿಗಳಿಗೆ ನಕಲಿ ಆಫ‌ರ್‌ ಲೆಟರ್‌ಗಳನ್ನು ವಿತರಿಸಿದ್ದು, ಅದನ್ನು ಪಡೆದಿರುವ ವಿದ್ಯಾರ್ಥಿಗಳೀಗ ಗಡಿಪಾರು ಭೀತಿ ಎದುರಿಸುವಂತಾಗಿದೆ.

Advertisement

ತಮ್ಮ ಆಫ‌ರ್‌ ಲೆಟರ್‌ ನಕಲಿ ಎಂದು ಗೊತ್ತಿಲ್ಲದ ಅನೇಕ ವಿದ್ಯಾರ್ಥಿಗಳು ಕೆನಡಾದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈಗ ಕೆನಡಾ ಸರ್ಕಾರ ಈ ಎಲ್ಲ ವಿದ್ಯಾರ್ಥಿಗಳನ್ನೂ ಭಾರತಕ್ಕೆ ಗಡಿಪಾರು ಮಾಡಲು ಸಿದ್ಧತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next