Advertisement

ನೆಕ್ಕಿಲದ ಡಂಪಿಂಗ್‌ ಯಾರ್ಡ್‌ ಬಳಿ ಸಮತಟ್ಟು

12:36 PM Dec 09, 2022 | Team Udayavani |

ಪುತ್ತೂರು: ನಗರದಲ್ಲಿ “ಮಿಯವಾಕಿ’ ಪದ್ಧತಿಯ ಕಿರು ಅರಣ್ಯ ಬೆಳೆಸುವ ಯೋಜನೆಗೆ ಬನ್ನೂರಿನ ನೆಕ್ಕಿಲ ಡಂಪಿಂಗ್‌ ಯಾರ್ಡ್‌ ಸನಿಹ ಅರ್ಧ ಎಕರೆ ಭೂ ಸಮತಟ್ಟುಗೊಳಿಸಿ ಮಳೆಗಾಲದಲ್ಲಿ ಗಿಡ ನಾಟಿಗೆ ಸಿದ್ಧಪಡಿಸಲಾಗಿದೆ.

Advertisement

ನಗರ ಹಸುರೀಕರಣ ಹಾಗೂ ಪರಿಸರ ಸಂರಕ್ಷಣೆ ನೆಲೆಯಲ್ಲಿ ಈ ಯೋಜನೆ ರೂಪುಗೊಂಡಿದ್ದು ಶೀಘ್ರ ಚಾಲನೆಗೆ ಬರುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮಿಯವಾಕಿ ಪದ್ಧತಿ ಪ್ರಕಾರ ಗಿಡನೆಟ್ಟು ಅರಣ್ಯ ಬೆಳೆಸುವುದನ್ನು ಪ್ರಾಯೋಗಿಕವಾಗಿ ಬನ್ನೂರು ತ್ಯಾಜ್ಯ ಸಂಸ್ಕರಣ ಘಟಕದ ಪ್ರದೇಶದಲ್ಲಿ ಪ್ರಾರಂಭಿಸಲು ನಿರ್ಧರಿಸಿ ಇದಕ್ಕಾಗಿ 50 ಸೆಂಟ್ಸ್‌ ಜಾಗ ಬಳಸಲಾಗಿದೆ. 15ನೇ ಹಣಕಾಸು ನಿಧಿ ಸೇರಿದಂತೆ ವಿವಿಧ ಯೋಜನೆಯ ಅನುದಾನ, ಸಾರ್ವಜನಿಕ ಸಂಘ ಸಂಸ್ಥೆಗಳ ಸಹಕಾರ ಪಡೆದು ಅನುಷ್ಠಾನ ಆಗಲಿದೆ.

ಏನಿದು ಮಿಯವಾಕಿ ಮಾದರಿ? ಮಿಯವಾಕಿ ಎಂಬ ಪರಿಸರ ತಜ್ಞ ನಗರಪ್ರದೇಶಗಳಲ್ಲಿ ಕಡಿಮೆ ಜಾಗದಲ್ಲಿ ಕಿರು ಅರಣ್ಯ ಬೆಳೆಸುತ್ತಿದ್ದರು. ನಿರೀಕ್ಷೆಗೂ ಮೀರಿ ಗಿಡಗಳನ್ನು ಬೆಳಸಲಾಗಿತ್ತು. ಈ ಮಾದರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇತರ ನಗರಗಳಿಗೂ ವ್ಯಾಪಿಸಿತು. ಇದನ್ನು “ಮಿಯವಾಕಿ ವಿಧಾನ’ ಎಂದೇ ಕರೆಯಲಾಗುತ್ತಿದೆ. ಬೆಂಗಳೂರು ಸೇರಿ ದೇಶದ ಇತರ ನಗರಗಳಲ್ಲೂ “ಮಿಯವಾಕಿ’ ಅರಣ್ಯ ನಿರ್ಮಾಣ ಕಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next