Advertisement

ಕುಷ್ಟಗಿ: ಧ್ರುವ ಸರ್ಜಾ ಜೊತೆ ಸೆಲ್ಫಿಗಾಗಿ ಅಭಿಮಾನಿಗಳ ಸರ್ಕಸ್

11:57 PM Dec 05, 2022 | Team Udayavani |

ಕುಷ್ಟಗಿ: ಕುಷ್ಟಗಿಯ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಅವರ 50ನೇ ಹುಟ್ಟು ಹಬ್ಬ ಪ್ರಯುಕ್ತ ನಡೆದ ಸಮಾರಂಭದಲ್ಲಿ‌ ನೆಚ್ಚಿನ ಯುವ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನು ನೋಡಲು ಅವರ ಅಭಿಮಾನಿಗಳು ಮುಗಿಬಿದ್ದರು.

Advertisement

ಪಟ್ಟಣದ ಹಸನಸಾಬ್ ದೋಟಿಹಾಳ ಅವರ ಜಾಗೆಯಲ್ಲಿ ವರ್ಣರಂಜಿತ ವೇದಿಕೆಯಲ್ಲಿ ನಡೆದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಜನ್ಮ ದಿನದ ಪ್ರಯುಕ್ತ ಅಭಿನಂದನಾ ಸಮಾರಂಭದಲ್ಲಿ ಪೊಲೀಸರು ಬ್ಯಾರಿಕೇಡ್ ನಂತೆ ನಿಂತರು ಸಹ ಅಭಿಮಾನಿಗಳು ಪೊಲೀಸರನ್ನು ಬೇಧಿಸಿ ನೆಚ್ಚಿನ ನಟ ಧ್ರುವ ಸರ್ಜಾ ಅವರನ್ನು ಭೇಟಿ ಮಾಡಿ,ಸೆಲ್ಪಿಗಾಗಿ ಹರಸಹಾಸ ಪಟ್ಟರು.

ನಟ ಧ್ರುವ ಸರ್ಜಾ ಅವರ ಬಾಕ್ಸರಗಳು, ಪೊಲೀಸರು, ಕಾರ್ಯಕರ್ತರು ಎಷ್ಟೇ ನಿಯಂತ್ರಿಸಿದರೂ ಜಗ್ಗದ ಅಭಿಮಾನಿಗಳು ವೇದಿಕೆ ಮೇಲೆರುತ್ತಿರುವುದು ಆಯೋಜಕರಿಗೆ ತಲೆನೋವು ತಂದಿತ್ತು.

ವೇದಿಕೆ ಒಂದು ಬದಿಯಿಂದ ಪೊಲೀಸರು ಇಳಿಸಿದರೆ ಮತ್ತೊಂದು ಬದಿಯಲ್ಲಿ ಏರುತ್ತಿರುವುದು ಹಾವು ಏಣಿಯಾಟದಂತಾಗಿತ್ತು.ವೇದಿಕೆಯ ಮುಂಭಾಗದಲ್ಲಿ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ದ್ರುವ ಸರ್ಜಾ ಅವರನ್ನು ತಮ್ಮ ಮೋಬೈಲ್ ನಲ್ಲಿ ಚಿತ್ರಿಸಿಕೊಂಡರಲ್ಲದೇ ಧ್ರುವ..ಧ್ರುವ ಎಂದು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ನೆಚ್ಚಿನ ನಟ ಧ್ರುವ ಸರ್ಜಾ ಅವರಿಗೆ ಅಭಿಮಾನಿಗಳು ಟಗರು ಕಾಣಿಕೆಯಾಗಿ ನೀಡಿದರು. ಓರ್ವ ಅಭಿಮಾನಿ ದ್ರುವ ಸರ್ಜಾ ಅವರ ಕಾಲು ಹಿಡಿದುಕೊಂಡು ಜಪ್ಪಯ್ಯ ಎಂದು ಬಿಡದೇ ಇದ್ದಾಗ, ಪೊಲೀಸರು ಬಿಡಿಸಿದರು. ಅಭಿಮಾನಿಗಳ‌ ತಳ್ಳಾಟ ನೂಕಾಟದಲ್ಲಿ‌‌ ನಟ ಧ್ರುವ ಸರ್ಜಾ ಬೇಸರಿಸಿಕೊಳ್ಳದೇ ಅಭಿಮಾನಿಗಳನ್ನು ಉದ್ದೇಶಿಸಿ ಇಲ್ಲಿ ರಾಜಕೀಯ ಮಾತನಾಡಲಾರೆ, ದೊಡ್ಡನಪಾಟೀಲ ಅವರ ಹಿಡಿದ ಸಂಕಲ್ಪ ಈಡೇರಲಿ. ನಮ್ಮೆಲ್ಲರ ಅಣ್ಣಾ… ದೊಡ್ಡನಗೌಡ ಪಾಟೀಲ ಅವರಿಗೆ ಶುಭಾಶಯ ಕೋರಿದರು. ನಂತರ ಧ್ರುವ ಸರ್ಜಾ ವೇದಿಕೆಯಿಂದ‌ ನಿರ್ಗಮಿಸುತ್ತಿದ್ದಂತೆ ಅಭಿಮಾನಿಗಳು ಅವರನ್ನು ಹಿಂಬಾಲಿಸಿರುವುದು ಕಂಡು ಬಂತು. ಸಂಗೀತ ಕಾರ್ಯಕ್ರಮಗಳು ನಡೆದವು.

Advertisement

ಕೊಪ್ಪಳ ಸಂಸದ ಕರಡಿ ಸಂಗಣ್ಣ, ಕನಕಗಿರಿ ಶಾಸಕ ಬಸವರಾಜ ದಡೇಸುಗೂರು, ಗಂಗಾವತಿ ಶಾಸಕ‌ ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಕೆ.ಶರಣಪ್ಪ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಅಭಿನಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next