Advertisement

Ramanagara; ಕಂಠಪೂರ್ತಿ ಕುಡಿದು ಶಾಲಾ ಬಸ್ ಚಲಾಯಿಸಿದ ಭೂಪ; ಸಾರ್ವಜನಿಕರಿಂದ ತರಾಟೆ

05:50 PM Jan 16, 2024 | Team Udayavani |

ರಾಮನಗರ: ಕುಡಿದ ಮತ್ತಿನಲ್ಲಿ ಶಾಲಾ ಬಸ್ ಚಾಲಾಯಿಸಿ ಎದುರಲ್ಲಿ ಹೋಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆಸಿದ ಘಟನೆ ಚನ್ನಪಟ್ಟಣ ತಾಲೂಕಿನ‌ ಕೆಂಗಲ್ ಬಳಿ ನಡೆದಿದೆ.

Advertisement

ಬಿಜಿಎಸ್ ವರ್ಲ್ಡ್ ಸ್ಕೂಲ್‌ ಗೆ ಸೇರಿರುವ ಶಾಲಾ ವಾಹನವನ್ನು ಚಾಲಕ ಕುಡಿದು ಚಲಾಯಿಸುತ್ತಿದ್ದ. ಬಸ್‌ ನಲ್ಲಿ ಮಕ್ಕಳಿದ್ದರೂ ಸಹ ಮದ್ಯ ಸೇವಿಸಿ ಚಲಾಯಿಸಿದ್ದಾನೆ.

ಟಾಟಾ ಏಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನ ಜಖಂ ಆಗಿದ್ದು, ಅದೃಷ್ಟವಶಾತ್ ಬಸ್ ನಲ್ಲಿದ್ದ ಮಕ್ಕಳು ಪಾರಾಗಿದ್ದಾರೆ. ಕುಡುಕ ಚಾಲಕನನ್ನು ಹಿಡಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಾಲಾ ಆಡಳಿತ ಮಂಡಳಿಯು ಮತ್ತೊಮ್ಮೆ ಇಂತಹ ತಪ್ಪು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಸಾರ್ವಜನಿಕರಿಗೆ ಮನವಿ‌ ಮಾಡಿಕೊಳ್ಳುತ್ತಿದೆ. ಆದರೆ ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕೆಂದು ಸಾರ್ವಜನಿಕರ ಪಟ್ಟು ಹಿಡಿದಿದ್ದಾರೆ.

ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಚನ್ನಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next