Advertisement

ಮದ್ಯ ಸೇವಿಸಿ ಲಾರಿ ಚಾಲನೆ; ಚಾಲಕ ಪೊಲೀಸ್‌ ವಶಕ್ಕೆ

01:33 PM Jun 18, 2019 | Team Udayavani |

ಹುಬ್ಬಳ್ಳಿ: ಮದ್ಯ ಸೇವಿಸಿ ಲಾರಿ ಚಾಲನೆ ಮಾಡುತ್ತಿದ್ದ್ದ ಚಾಲಕನು ಕರ್ತವ್ಯದಲ್ಲಿದ್ದ ಮಹಿಳಾ ಸಂಚಾರ ಪೇದೆ ಮಾತು ಕೇಳದೆ ಮುನ್ನುಗ್ಗಿದ್ದಲ್ಲದೆ, ಕೋರ್ಟ್‌ ವೃತ್ತದಲ್ಲಿ ಎರಡು ಬಾರಿ ರೌಂಡ್‌ ಚಲಾಯಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

Advertisement

ಬಾಗಲಕೋಟೆ ತಾಲೂಕು ರಾಮತಾಳ ಗ್ರಾಮದ ಯಮನೂರ ಕೆ. ಗೌಡರ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಚನ್ನಮ್ಮ ವೃತ್ತದಿಂದ ಕ್ಲಬ್‌ ರಸ್ತ್ತೆ ಮಾರ್ಗವಾಗಿ ಬಾಗಲಕೋಟೆಗೆ ಹೊರಟಿದ್ದ. ಆದರೆ ದೇಸಾಯಿ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗ ಬಂದ್‌ ಆಗಿದೆ. ಕರ್ತವ್ಯದಲ್ಲಿದ್ದ ಮಹಿಳಾ ಸಂಚಾರ ಪೇದೆಯೊಬ್ಬರು ರಸ್ತೆ ಬಂದ್‌ ಆಗಿದೆ. ಸಾಯಿ ಮಂದಿರ ಮಾರ್ಗವಾಗಿ ಹೋಗಬೇಕು ಎಂದು ಹೇಳಿದರೂ ಕೇಳದೆ, ನೀವೆಲ್ಲ ರಸ್ತೆ ಬಂದ್‌ ಮಾಡಿಕೊಂಡರೆ ನಾವು ಹೋಗೋದು ಹೇಗೆ. ನಾನು ಹೀಗೆಯೇ ಹೋಗುತ್ತೇನೆ ಎಂದು ಕ್ಲಬ್‌ ರಸ್ತೆ ಮುಖಾಂತರ ಹೋಗಲುಮುಂದಾಗಿದ್ದಾನೆ. ಮತ್ತೆ ಮಹಿಳಾ ಪೇದೆಯು ವಾಹನ ತಡೆದಾಗ ಅಲ್ಲಿಯೇ ಕೋರ್ಟ್‌ ವೃತ್ತದಲ್ಲಿ ಲಾರಿಯನ್ನು ಎರಡು ರೌಂಡ್‌ ಸುತ್ತಾಡಿಸಿದ್ದಾನೆ. ಆಗ ಸ್ಥಳಕ್ಕೆ ಇನ್ನಿತರೆ ಸಂಚಾರ ಠಾಣೆ ಪೊಲೀಸರು ಆಗಮಿಸಿ ಆತನನ್ನು ತಡೆದಾಗ ಮದ್ಯ ಸೇವಿಸಿದ್ದು ಗೊತ್ತಾಗಿದೆ. ನಂತರ ಅವನನ್ನು ವಶಕ್ಕೆ ಪಡೆದು, ಲಾರಿಯನ್ನು ಹಿರಿಯ ಸಂಚಾರ ಪೇದೆ ಚಲವಾದಿ ಅವರು ಪೂರ್ವ ಸಂಚಾರ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಪೂರ್ವ ಸಂಚಾರ ಠಾಣೆಯಲ್ಲಿ ಯಮನೂರ ವಿರುದ್ಧ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next