Advertisement

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

10:14 PM May 18, 2019 | Sriram |

ಪದುವಾ: ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ರಾಜ್ಯ ಮಟ್ಟದ ಕ್ರೀಡಾಕೂಟದ ಉದ್ಘಾಟನೆ ಶನಿವಾರ ನಗರದ ಪದುವಾ ಶಾಲಾ ಮೈದಾನದಲ್ಲಿ ನಡೆಯಿತು.

Advertisement

ಸಂಘಟನೆಗೆ ಕ್ರೀಡಾಕೂಟ ಅಗತ್ಯ
ಶಾಸಕ ಉಮಾನಾಥ ಕೋಟ್ಯಾನ್‌ ಉದ್ಘಾಟಿಸಿ, ಹಿಂದೂ ಸಮಾಜದ ಸಂಘಟನೆಗೆ ಇಂತಹ ಕ್ರೀಡಾ ಕೂಟಗಳು ಅವಶ್ಯವಾಗಿದೆ. ಯಾವುದೇ ಜಾತಿಯ ಸಂಘಟನೆ ಅಸ್ಥಿತ್ವಕ್ಕೆ ಬಂದರೂ ಆಯಾ ಸಮುದಾಯದ ಪ್ರತಿಭೆಗಳಿಗೆ ಪ್ರೋತ್ಸಾಹ, ಸಮುದಾಯದ ಏಳಿಗೆಗೆ ಆಗಿದೆ. ಆದರೆ ಹಿಂದೂ ಸಮಾಜ ಎಂದಾಗ ಎಲ್ಲ ಪಂಗಡಗಳ ಸಂಘಗಳು ಒಗ್ಗಟ್ಟಾಗಿ ಕೊಡುಗೆ ನೀಡುತ್ತಿವೆ. ಜೋಗಿ ಸಮುದಾಯವೂ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ ಎಂದರು.

ದೈಹಿಕ, ಮಾನಸಿಕ
ಬೆಳವಣಿಗೆಗೆ ಸಹಕಾರಿ
ಡಾ| ಭರತ್‌ ಶೆಟ್ಟಿ ವೈ ಮಾತನಾಡಿ, ಕ್ರೀಡಾಕೂಟದಿಂದ ಸಮುದಾಯದ ಜನ ಬೆರೆಯಲು ಸಿಗುವ ಅಪೂರ್ವ ಅವಕಾಶ ಜತೆಗೆ ನಮ್ಮ ನಮ್ಮ ದೈಹಿಕ, ಮಾನಸಿಕ ಬೆಳವಣಿಗೆಗೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದರು.

ಸುವರ್ಣ ಮಹೋತ್ಸವದ ಕಾರ್ಯಾಧ್ಯಕ್ಷ ಎಚ್‌.ಕೆ. ಪುರುಷೋತ್ತಮ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್‌ ಜೋಗಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ, ಮಾಜಿ ಕಾರ್ಪೊರೇಟರ್‌ ಅಶೋಕ್‌ ಡಿ.ಕೆ., ಉದ್ಯಮಿ ಗೋಕುಲ್‌ದಾಸ್‌ ಕದ್ರಿ, ಸಂಘದ ಉಪಾಧ್ಯಕ್ಷ ಡಾ| ಕೇಶವನಾಥ್‌, ದೈಹಿಕ ನಿರ್ದೇಶಕ ಹರೀಶ್‌ ಗೌಡ, ಜೋಗಿ ಸಮಾಜ ಸುಧಾರಕ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಅಮಿತ ಸಂಜೀವ, ಪ್ರಭಾಕರ ಜೆ., ಯುವ ಘಟಕದ ಅಧ್ಯಕ್ಷ ಸಚ್ಚೀಂದ್ರನಾಥ್‌ ಮತ್ತಿತರರು ಉಪಸ್ಥಿತರಿದ್ದರು. ವಿನಯಾನಂದ ಕಾನಡ್ಕ ನಿರೂಪಿಸಿದರು. ದೀಕ್ಷಿತ್‌ ವಂದಿಸಿದರು.

Advertisement

ಪ್ರತಿಭೆಗಳ ಅನಾವರಣಕ್ಕೆ ವೇದಿಕೆ
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಜೋಗಿ ಸಮಾಜ ಸುಧಾರಕ ಸಂಘ ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು,ಸಮುದಾಯದ ಜನರಿಗಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದೆ.ಯುವ ಸಮಾಜ ಬಲಿಷ್ಠವಾಗಲು ಕ್ರೀಡೆ ಸಹಾಯವಾಗಬಲ್ಲುದು.ಪ್ರತಿಭೆಗಳ ಅನಾವರಣಕ್ಕೆ ಇಂತಹ ವೇದಿಕೆಗಳು ಯುವಕರಿಗೆ ಹೆಚ್ಚು ಸಿಗಬೇಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next