Advertisement

ಅಖಂಡ ಭಜನ ಸಪ್ತಾಹಕ್ಕೆ ಚಾಲನೆ

07:25 AM Jul 29, 2017 | Team Udayavani |

ಕುಂದಾಪುರ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಅಖಂಡ ಭಜನಾ ಸಪ್ತಾಹ ಮಹೋತ್ಸವ ದೀಪ ಸ್ಥಾಪನಾಪೂರ್ವಕ ಅಖಂಡ ಭಜನಾ ಸಪ್ತಾಹ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

Advertisement

ದೇಗುಲದ‌ ಪ್ರಧಾನ ಅರ್ಚಕ ವೇ|ಮೂ| ಎಸ್‌.ವೆಂಕಟರಮಣ ಆಚಾರ್ಯ, ದೇವಳದ ತಾಂತ್ರಿಕ ವೇ|ಮೂ| ಜಿ.ವಸಂತ ಭಟ್‌ ಹಾಗೂ ವೇ|ಮೂ| ಜಿ.ಅನಂತಕೃಷ್ಣ ಭಟ್‌ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಆಡಳಿತ ಮೊಕ್ತೇಸರ ಎನ್‌.ಸದಾಶಿವ ನಾಯಕ್‌, ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್‌, ಕೆ.ಪದ್ಮನಾಭ ನಾಯಕ್‌, ಡಾ| ಕಾಶೀನಾಥ ಪೈ, ಜಿ.ನಿತ್ಯಾನಂದ ಶೆಣೆ„, ಎಂ. ವಿನೋದ ಪೈ, ಟಿ.ಗಂಗಾಧರ ಶೆಣೈ, ಎಂ. ವಾಮನ ಪೈ, ಎನ್‌. ಕೃಷ್ಣಾನಂದ ನಾಯಕ್‌, ಬಿ.ಕೃಷ್ಟ್ರಾಯ ಪೈ ಮೊದಲಾದವರು ಉಪಸ್ಥಿತರಿದ್ದರು.

ಅಖಂಡ ಭಜನ ಸಪ್ತಾಹ ಮಹೋತ್ಸವವು ಆ. 4ರಂದು ದೀಪ ವಿಸರ್ಜನೆಯೊಂದಿಗೆ ಸಂಪನ್ನಗೊಳ್ಳಲಿದೆ. ಆ. 3ರಂದು ಸಂಜೆ 5 ಗಂಟೆಗೆ ನಗರ ಭಜನೆ, ರಾತ್ರಿ ವಿಶೇಷ ಪೂಜೆ, ಅಖಂಡ ಭಜನ ಸಪ್ತಾಹ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ವಿಶೇಷ ಪೂಜೆ, ಪುನಸ್ಕಾರಗಳು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next