Advertisement
ಹಿರೀಸಾವೆ ಹೋಬಳಿಯ ರೈತರ ದಶಕಗಳ ಕನಸ್ಸಾಗಿದ್ದ ತೋಟಿಕೆರೆ ನೀರಾವರಿ ಯೋಜನೆಗೆ ಅಂತೂ- ಇಂತೂ ನನಸಾಗುವ ಶುಭಗಳಿಗೆ ಕೂಡಿಬಂದಿದ್ದು, ಸದ್ಯ ವ್ಯಾಪ್ತಿಯ ತೋಟಿ ಗ್ರಾಮದ ಕೆರೆಯ ಆವರಣ ದಲ್ಲಿ ತೋಟಿಕೆರೆ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸುವ ಮೂಲಕ ತಾಲೂಕು ಹಾಗೂ ಹಿರೀಸಾವೆ ಹೋಬಳಿಯ ನೀರಾವರಿ ಯೋಜನೆಗಳಿಗೆ ಮುನ್ನುಡಿ ಬರೆಯಲಿದ್ದಾರೆ.ಕಳೆದ 15 ವರ್ಷಗಳಿಂದ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಯಂತೆ ಮಳೆಯಾಗದ ಕಾರಣ ಯಾವುದೇ ಕೆರೆ-ಕಟ್ಟೆಗಳಲ್ಲಿ ನೀರಿಲ್ಲ, ಅಂತರ್ಜಲವೂ ಬತ್ತಿದೆ. ಪರಿ ಣಾಮ ತೆಂಗು ಬೆಳೆ ನಾಶವಾಗಿದ್ದು, ಜನ- ಜಾನು ವಾರುಗಳಿಗೂ ಕುಡಿವ ನೀರಿಗೆ ತೀರ್ವ ಅಭಾವ ಸೃಷ್ಟಿಯಾಗಿದೆ.
Related Articles
Advertisement
ರೈತರಲ್ಲಿ ಆಶಾ ಭಾವನೆ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರಿಗೆ ಹಾಗೂ ಹೆಚ್.ಡಿ.ರೇವಣ್ಣನವರಿಗೆ ರಾಜಕೀಯವಾಗಿ ಶಕ್ತಿ ನೀಡಿದಂತಹ ದಂಡಿಗನಹಳ್ಳಿ ಹೋಬಳಿಗೆ ಸೇರಿದ ಆಲಗೊಂಡನಹಳ್ಳಿ ಹಾಗೂ ಕಾಚೇನಹಳ್ಳಿ ಏತ ನೀರಾವರಿ ಯೋಜನೆಗಳು 1991 ರಲ್ಲಿ ಶಂಕುಸ್ಥಾಪನೆಯಾದರೂ ಸಹ ಆ ಭಾಗದ ರೈತರ ಕೆರೆಗಳಿಗೆ ನೀರು ತುಂಬಿಸಿಲ್ಲ. ಕಾಚೇನಹಳ್ಳಿ ಏತ ನೀರಾವರಿಯ ಮೋದಲನೇ ಹಂತದಿಂದ ಕೆಲವು ಕೆರೆಗಳಿಗೆ ನೀರು ತುಂಬಿಸಿದ್ದನ್ನು ಬಿಟ್ಟರೆ 2 ನೇ ಹಂತದ ಕಾಮಗಾರಿ ಸಂಪೂರ್ಣವಾಗಿಲ್ಲ. ರೈಲ್ವೆ ಮೇಲ್ಸೇತುವೆ ಪೂರ್ಣವಾಗಿಲ್ಲ. ದಂಡಿಗನಹಳ್ಳಿ ಬಳಿ ರಸ್ತೆಯಿಂದ ಆಚೆಗೆ ನೀರು ಹರಿಸಲು ಕಾಲುವೆ ತೋಡಲು ಅಡ್ಡವಾಗಿರುವ ದೊಡ್ಡ ಬಂಡೆಯನ್ನು ಒಡೆದು ಕಾಮಗಾರಿ ಪೂರ್ಣ ಗೊಳಿಸಿಲ್ಲ. ಈಗ 3ನೇಹಂತದ ಶಂಕುಸ್ಥಾಪನೆ ಯಾಗುತ್ತಿದೆ. ಆ ಭಾಗದ ರೈತರು ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಯಾಗಿರುವುದ ರಿಂದ ಈಗಲಾದರೂ ಪೂರ್ಣಗೊಳ್ಳುತ್ತದೆ ಎಂಬ ಆಶಾ ಭಾವನೆ ಮೂಡಿದೆ. ಯೋಜನೆಗಳಿಗೆ ಶಂಕುಸ್ಥಾಪನೆ ದಂಡಿಗನಹಹಳ್ಳಿ ಹೋಬಳಿಯ ಕಾಚೇನಹಳ್ಳಿ ಬಳಿ ಹೇಮಾವತಿ ನದಿಯಿಂದ 3ನೇ ಹಂತಕ್ಕೆ ನೀರು ಒದಗಿಸುವ ಏತ ನೀರಾವರಿ ಯೋಜನೆ. ಆನೆಕೆರೆ ಶಂಭುದೇವರ ಕೆರೆಯಿಂದ ನೀರೆತ್ತಿ ತಾಲೂಕಿನ 26 ಕೆರಗಳಿಗೆ ನೀರು ಹ ರಿಸುವ ಆಲ ಗೊಂಡನಹಳ್ಳಿ ಏತನೀರಾವಾರಿ ಯೋಜನೆ. ಬಾಗೂರು ನವಿಲೆ ಸುರಂಗದ ನಿರ್ಗಮನ ದಿಂದ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ ಬಾಗೂರು ಹೋಬಳಿಯ 19 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 25 ಕೆರೆಗಳಿಗೆ ನೀರು ಚನ್ನರಾಯಪಟ್ಟಣದ ಅಮಾನಿಕೆರೆಯಿಂದ ಕಟಿಗೆ ಹಳ್ಳಿ ವರೆಗೆ ಏತ ನೀರಾವರಿ ಮೂಲಕ ನೀರು ತಂದು, ಅಲ್ಲಿಂದ ನಾಲೆಯ ಮೂಲಕ ತೋಟಿಕೆರೆ ಸೇರಿದಂತೆ ಸುಮಾರು 25 ಕೆರೆಗಳಿಗೆ ನೀರು ಹರಿಸಲಾಗುವುದು. ಇದರಿಂದ ಬೆಳಗೀಹಳ್ಳಿ, ಅಕ್ಕನಹಳ್ಳಿ ಹಾಗೂ ಜಿನ್ನೇನಹಳ್ಳಿ ಗ್ರಾಪಂ ವ್ಯಾಪ್ತಿಯ 25 ಕೆರೆಗಳಿಗೆ ನೀರು ಹರಿಯಲಿದ್ದು, ಯೋಜನೆಯ ಅಂದಾಜು ವೆಚ್ಚ ರೂ.70 ಕೋಟಿ ಆಗಲಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ನಾಲೆಗಳು ಹರಿದರೂ ಸಹ ಹೆಚ್ಚು ಪಾಲು ನೀರಾವರಿ ಸಿಗದೆ ಬರಪೀಡಿತವಾಗಿದ್ದು, ಈ
ನಿಟ್ಟಿನಲ್ಲಿ ಕುಡಿಯುವ ನೀರಿಗಾಗಿ ಕೆರೆಕಟ್ಟೆಗಳನ್ನು ತುಂಬಿಸಬೇಕಾಗಿದೆ. ಮುಖ್ಯಮಂತ್ರಿಗಳು ವಿವಿಧ ನೀರಾವರಿ
ಯೋಜನೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸಿ.ಎನ್.ಬಾಲಕೃಷ್ಣ, ಶಾಸಕ