Advertisement

ಕುಡಿಯಿರಿ ಮತ್ತು ಗಳಿಸಿರಿ

04:44 AM Jul 07, 2020 | Lakshmi GovindaRaj |

ಕೋವಿಡ್‌ 19ನಿಂದ ಪಾರಾಗಬೇಕು ಅಂದರೆ, ದೇಹಕ್ಕೆ ಶಕ್ತಿ ಬೇಕು. ಅಂದರೆ, ರೋಗ ನಿರೋಧಕ ಗುಣ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ  ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ಸ್ಪೂನ್‌ ಸಾವಯವ ಅರಿಷಿನ, ಎರಡು ಲವಂಗ ಮತ್ತು  ಒಂದು ನಿಂಬೆಹಣ್ಣನ್ನು ಒಟ್ಟು ಸೇರಿಸಿ, ಮೇಲ್ಮೆç ಅನ್ನು ಸವರಿದ ಶುಂಠಿಯನ್ನು ಒಂದು ಲೀಟರ್‌ ನೀರಿಗೆ ಹಾಕಿ, ಅದು ಅರ್ಧ ಲೀಟರ್‌ ಆಗುವವರೆಗೂ ಕುದಿಸಿ. ಆಮೇಲೆ, ಅದನ್ನು ಬಿಸಿ ಇರುವಾಗಲೇ ಕುಡಿಯಿರಿ.

Advertisement

ನಿಮ್ಮದು, ಶೀತದ  ದೇಹವಾಗಿದ್ದರೆ ದಿನಕ್ಕೆ ಎರಡು ಸಲ ಕುಡಿಯಿರಿ. ಒಂದು ಪಕ್ಷ, ಉಷ್ಣದ ಮೈ ಆಗಿದ್ದರೆ, ಒಂದೇ ಸಲ ಸಾಕು. ನಿಮಗೆ, ಫೈಲ್ಸ್‌, ಪಿಸ್ತೂಲದಂಥ ಸಮಸ್ಯೆಗಳಿದ್ದರೆ ಉಷ್ಣ ಹೆಚ್ಚಾದಷ್ಟು ಬಾಧೆಯೂ ಏರುತ್ತದೆ. ಹಾಗಾಗಿ, ಲವಂಗ, ಶುಂಠಿ, ಅರಿಷಿನದ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ಇದಲ್ಲದೆ, ಅಮೃತಬಳ್ಳಿಯ ಸೊಪ್ಪನ್ನೋ, ಕಾಂಡವನ್ನು ಚೆನ್ನಾಗಿ ಕುದಿಸಿಟ್ಟುಕೊಂಡು ದಿನಕ್ಕೆ ಎರಡು ಬಾರಿ ಕುಡಿದರೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಆದರೆ  ಗೊತ್ತಿರಲಿ, ಕುಡಿದಾಕ್ಷಣ ಒಂದೇ ದಿನಕ್ಕೆ ರೋಗ ನಿರೋ ಧಕ ಗುಣ ಹೆಚ್ಚಾಗಲ್ಲ. ತುಳಸಿಯನ್ನು ನೀರಿಗೆ ಹಾಕಿ, ಕುದಿಸಿ ಕುಡಿದರೂ ಪ್ರಯೋ ಜನವಿದೆ. ಸೊಗದೇ ಬೇರಿನ ಷರಬತ್ತು ಕುಡಿಯುವುದರಿಂದ ದೇಹದ ಉಷ್ಣಾಂಶ ವನ್ನು ಇಳಿಸಿಕೊಳ್ಳಬಹುದು. ಇನ್ನೊಂದು ಲಾಭ ಏನೆಂದರೆ,  ಹೊಟ್ಟೆಯ ಹುಣ್ಣನ್ನು, ಸೊಗದೇಬೇರು ಕಡಿಮೆ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next