Advertisement

ಹಿರಿಯ ಮಾಧ್ಯಮ ಕಾರ್ಯಕರ್ತ, ಸಾಹಿತಿ, ರಂಗಕರ್ಮಿ ಡಾ|ವಿಶ್ವಾಸ್‌ ಮೆಹೆಂದಾಲೆ ನಿಧನ

05:05 PM Jan 09, 2023 | Team Udayavani |

ಮುಂಬಯಿ: ನಗರದ ಹಿರಿಯ ಮಾಧ್ಯಮ ಕಾರ್ಯಕರ್ತ, ಸಾಹಿತಿ, ರಂಗಕರ್ಮಿ ಡಾ| ವಿಶ್ವಾಸ್‌ ಮೆಹೆಂದಾಲೆ ಅವರು ತನ್ನ 84 ನೇ ವಯಸ್ಸಿನಲ್ಲಿ ಸೋಮವಾರ ಕೊನೆಯುಸಿರೆಳೆದರು.

Advertisement

ಅವರ ಪಾರ್ಥಿವ ಶರೀರವನ್ನು ಮುಲುಂಡ್‌ ಪೂರ್ವದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಅವರು ಕೆಲವು ಸಮಯ ಮಹಾರಾಷ್ಟ್ರ ಸರಕಾರದ ಮಾಧ್ಯಮ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ ಅವರು, ಪತ್ರಕರ್ತರಾಗಿ, ಲೇಖಕರಾಗಿ, ಕಲಾವಿದರಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುವುದರೊಂದಿಗೆ 18ಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.

ಜೊತೆಗೆ ಮರಾಠಿ ರಂಗಭೂಮಿಯ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದರು. ದೂರದರ್ಶನದಲ್ಲಿ ಮೊದಲ ಮಠಾಠಿ ವರದಿಗಾರರಾಗಿ, ನಿರೂಪಕರಾಗಿ ತಮ್ಮ ಮಾಧ್ಯಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಮಹಾರಾಷ್ಟ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ, ಪುಣೆ ವಿಶ್ವವಿದ್ಯಾಲಯದ ವಿಭಾಗದ ಖಾತೆ ಮುಖ್ಯಸ್ಥರಾಗಿ, ಸಿಂಬಯೋಸಿಸ್‌ ಇನ್ಸ್ಟಿಟ್ಯೂಟ್‌ ಆಫ್‌ ಮೀಡಿಯಾ ಅಂಡ್ ಕಮ್ಯುನಿಕೇಷನ್‌ ಇದರ ಸ್ಥಾಪಕರಾಗಿ, ದೂರದರ್ಶನದ ಮುಂಬಯಿ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ರಂಗಭೂಮಿ ಕಲಾವಿದರಾಗಿದ್ದ ಅವರ ಮಾಲಾ ಭೆಹೆಲೆ ಮಾಂಹಿ ಎಂಬ ಏಕವ್ಯಕ್ತಿ ಕಾರ್ಯಕ್ರಮ ವಿಶೇಷವಾಗಿ ಜನಪ್ರಿಯವಾಗಿತ್ತು. ನೂರಾರು ಮಹತ್ವದ ನಾಟಕಗಳಲ್ಲಿ ನಟಿಸಿದ್ದಾರೆ. ಅವರ ಸಿದ್ಧಿ-ಸಾಧನೆಗಳಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next