Advertisement

ಡಾ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದ ಕಿಚ್ಚ ಸುದೀಪ್ ದಂಪತಿ

04:45 PM Jul 30, 2022 | Team Udayavani |

ನವದೆಹಲಿ : ಪ್ಯಾನ್ ಇಂಡಿಯಾ ಸಿನಿಮಾ ”ವಿಕ್ರಾಂತ್ ರೋಣ” ಚಿತ್ರದ ಭರ್ಜರಿ ಬಿಡುಗಡೆಯ ಸಿದ್ದತೆಯ ನಡುವೆ ಕಿಚ್ಚ ಸುದೀಪ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ನೂತನ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

Advertisement

ದೆಹಲಿಯಲ್ಲಿ ವಿಕ್ರಾಂತ್ ರೋಣ ಚಿತ್ರದ ವಿಶೇಷ ಪ್ರೀಮಿಯರ್ ಶೋ ಗೆಂದು ತೆರಳಿದ್ದ ವೇಳೆ  ಕಿಚ್ಚ ಸುದೀಪ್ ದಂಪತಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡಿ ಫೋಟೋ ಗಳನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋಗಳು ಸಾಮಾಜಿಕ ತಾಣ ಗಳಲ್ಲಿ ವೈರಲ್ ಆಗುತ್ತಿವೆ. ನಿರ್ಮಾಪಕ ಜಾಕ್ ಮಂಜು ಅವರೂ ಫೋಟೋದಲ್ಲಿದ್ದಾರೆ.

ರಾಜ್ಯಸಭೆಗೆ ನಾಮ ನಿರ್ದೇಶನಗೊಂದಿರುವುದಕ್ಕೆ ಡಾ. ಹೆಗ್ಗಡೆ ಅವರಿಗೆ ಸುದೀಪ್ ದಂಪತಿ ಶುಭಾಶಯಗಳನ್ನೂ ತಿಳಿಸಿದರು.

ವಿಶೇಷವಾಗಿ ಸಂಸದರಿಗೆ ಮತ್ತು ಅಧಿಕಾರಿಗಳಿಗಾಗಿ ಮಾತ್ರ ‘ವಿಕ್ರಾಂತ್ ರೋಣ’ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next