Advertisement

ಮಹಿಳೆಯ ಮಾಂಗಲ್ಯ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಡಾ. ಸುಧಾಕರ್ ಗನ್ ಮ್ಯಾನ್

08:10 PM Jul 11, 2022 | Team Udayavani |

ಬೆಂಗಳೂರು: ಮಹಿಳೆಯೊಬ್ಬರು ಶಾಪಿಂಗ್ ಮಾಲ್ ನಲ್ಲಿ ಕಳೆದುಕೊಂಡಿದ್ದ ಚಿನ್ನದ ಆಭರಣ ತನಗೆ ಸಿಕ್ಕ ಕೂಡಲೇ ಆ ಮಹಿಳೆಯನ್ನು ಪತ್ತೆ ಹಚ್ಚಿ ಆಭರಣವನ್ನು ಹಿಂದಿರುಗಿಸುವ ಮೂಲಕ ಸಚಿವ ಡಾ.ಸುಧಾಕರ್ ಅವರ ಗನ್ ಮ್ಯಾನ್ ಅಂಜನ್ ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಚಿನ್ನ ಮರಳಿ ಪಡೆದುಕೊಂಡ ಮಹಿಳೆ ಅಂಜನ್ ಅವರಿಗೆ ಕೃತಜ್ಞತೆ ತಿಳಿಸಿ ಬರೆದ ಪತ್ರ ನೋಡಿ ಹೆಮ್ಮೆ ಎನಿಸಿತು ಎಂದು ಸಚಿವ ಡಾ.ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ.

ಬಸವೇಶ್ವರನಗರದ ಅಶ್ವಿನಿ ಆರ್ ಎನ್ನುವವರು ಮಾಂಗಲ್ಯ ಸರವನ್ನು ಜೂನ್ 25 ರಂದು ಮಾಲ್ ನಲ್ಲಿ ಕಳೆದುಕೊಂಡಿದ್ದರು. ಆ ಸರವನ್ನು ಪ್ಯಾಂಟಲೂನ್ಸ್ ಮ್ಯಾನೇಜರ್ ಗೆ ಅಂಜನ್ ಮರಳಿಸಿದ್ದರು. ಈ ಬಗ್ಗೆ ಕೃತಜ್ಞತೆ ಸಲ್ಲಿಸಿ ಪೊಲೀಸ್ ಆಯುಕ್ತರಿಗೆ ಅಶ್ವಿನಿ ಆರ್ ಪತ್ರ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next