Advertisement

ಮೋದಿ – ಶಾ ಜೋಡಿಗೆ ಡಾ. ಸುಧಾಕರ್ ಬಹುಪರಾಕ್!

09:11 AM Aug 07, 2019 | Team Udayavani |

ಬೆಂಗಳೂರು: ಜಮ್ಮು-ಕಾಶ್ಮೀರಕ್ಕೆನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಇಚ್ಛಾಶಕ್ತಿಯನ್ನು ತೋರ್ಪಡಿಸಿರುವ ಕೆಂದ್ರ ಸರಕಾರವನ್ನು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ತಂತ್ರಗಾರಿಕೆಯನ್ನು ಡಾ. ಸುಧಾಕರ್ ಅವರು ಪ್ರಶಂಸಿದ್ದಾರೆ.

Advertisement

‘370ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೇಶದ ಸಾರ್ವಭೌಮತೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಭಾರತವೂ ಯಾವತ್ತೂ ಅಖಂಡವಾಗಿರುತ್ತದೆ. ಭಾರತ್ ಮಾತಾ ಕಿ ಜೈ’ ಎಂದು ಡಾ. ಸುಧಾಕರ್ ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣಕ್ಕಾಗಿ ಸುಧಾಕರ್ ಅವರು ಶಾಸಕತ್ವದಿಂದ ಅನರ್ಹಗೊಂಡಿದ್ದರು.

My hearty congratulations and thanks to PM Narendra Modi and HM Amith Shah for showcasing today that the unity of the nation is above all else by taking the historic and brave decision to scrap Article 370. India is one. Bharath Mata ki jai. pic.twitter.com/nXmb74wXT8

Advertisement
Advertisement

Udayavani is now on Telegram. Click here to join our channel and stay updated with the latest news.

Next