Advertisement

ಮುರುಘಾ ಶರಣರ ಆರೋಗ್ಯ ಸ್ಥಿರ

07:25 AM Jun 17, 2018 | |

ಚಿತ್ರದುರ್ಗ: ಅನಾರೋಗ್ಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದ ಡಾ|
ಶಿವಮೂರ್ತಿ ಮುರುಘಾ ಶರಣರು ಸಂಪೂರ್ಣ ಗುಣಮುಖರಾಗಿದ್ದಾರೆ.

Advertisement

ಚಿಕಿತ್ಸೆ ಪಡೆದ ನಂತರ ಶನಿವಾರ ಸಂಜೆ 6:30ಕ್ಕೆ ಮುರುಘಾ ಶರಣರು ಮಠಕ್ಕೆ ಆಗಮಿಸಿದರು. ಕಳೆದ ಜೂನ್‌ 8 ರಂದು ಉಸಿರಾಟ ಸಮಸ್ಯೆಯಿಂದ ಬಳಲಿದ್ದ ಮುರುಘಾ ಶರಣರು ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಜೂ.11 ರಂದು ಮಠಕ್ಕೆ ಮರಳಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಶುಕ್ರವಾರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡರು. ಈಗ ಮುರುಘಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next