Advertisement

ರಾಯಚೂರು ಡಿಸಿಯಾಗಿ ಡಾ.ಸತೀಶ ಅಧಿಕಾರ ಸ್ವೀಕಾರ

02:54 PM Jul 23, 2021 | Team Udayavani |

ರಾಯಚೂರು : ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಸತೀಶ ಬಿ.ಸಿ. ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ‌ಅವರು, ‘ವೃತ್ತಿ ಬದುಕಿನಲ್ಲಿ ಜಿಲ್ಲಾಧಿಕಾರಿಯಾಗಿ ಮೊದಲ ಬಾರಿಗೆ ರಾಯಚೂರಿಗೆ ನಿಯೋಜನೆಗೊಂಡಿದ್ದೇನೆ. ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಅಧಿಕಾರದ ಪರಿಮಿತಿಯೊಳಗೆ ಉತ್ತಮ ಕೆಲಸ ಮಾಡುವ ಗುರಿ ಹೊಂದಿದ್ದೇನೆ. ಈ ಭಾಗದಲ್ಲಿ ಹಿಂದೆ ಕೆಲಸ ಮಾಡಿದ್ದು, ಭೌಗೋಳಿಕವಾಗಿ ಸಾಕಷ್ಟು ಮಾಹಿತಿ ಇದೆ. ಆದರೆ, ಈಗಲೇ ಏನೇನು ಕೆಲಸ ಮಾಡುತ್ತೇನೆ ಎಂದು ಹೇಳುವುದಿಲ್ಲ. ಆದರೆ, ಸರ್ಕಾರದ ನಿಯಮಾನುಸಾರ ನಿಷ್ಠೆಯಿಂದ ಕೆಲಸ  ಮಾಡುವುದಾಗಿ ತಿಳಿಸಿದರು.

Advertisement

2012 ರ ಬ್ಯಾಚ್ ಕೆಎಎಸ್ ಅಧಿಕಾರಿಯಾಗಿದ್ದು, 2017 ರಲ್ಲಿ ಯಾದಗಿರಿ ಜಿಲ್ಲೆಯ ಎಡಿಸಿಯಾಗಿ ಒಂದು ವರ್ಷ ಕೆಲಸ ಮಾಡಿದ್ದೇನೆ. ಪ್ರಸ್ತುತಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದೆ. ಕೊಪ್ಪಳದಲ್ಲಿ ಪ್ರೊಬೇಶನರಿಯಾಗಿ ಒಂದು ವರ್ಷ ಹಾಗೂ ಧಾರವಾಡ ಜಿಲ್ಲೆಯ ಜಿಪಂ ಸಿಇಒ ಆಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಹಿಂದೆ ರಾಯಚೂರು ಡಿಸಿಯಾಗಿದ್ದ ಆರ್. ವೆಂಕಟೇಶ ಕುಮಾರ್ ರನ್ನು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next