Advertisement

ಡಾ.ರಾಜ್‌ 12ನೇ ಪುಣ್ಯಸ್ಮರಣೆ

06:55 AM Apr 13, 2018 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜಕುಮಾರ್‌ ಇಲ್ಲದ 12 ವರ್ಷಗಳು ಕಳೆದಿವೆ. ದೈಹಿಕವಾಗಿ ರಾಜಕುಮಾರ್‌ ಇಲ್ಲದಿದ್ದರೂ, ಅವರ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಗುರುವಾರ ಕಂಠೀರವ ಸ್ಟುಡಿಯೋಗೆ ತೆರಳಿದ ರಾಜ್‌ ಕುಟುಂಬ ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ಸ್ಮರಣೆ ಮಾಡಿತು. 

Advertisement

ಡಾ.ರಾಜ್‌ ಅವರ ಸಹೋದರಿ ನಾಗಮ್ಮ, ಪುತ್ರರಾದ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ಸೇರಿ ಕುಟುಂಬ ವರ್ಗದವರು ರಾಜ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಆರತಿ ಬೆಳಗಿದರು.

12ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅಪಾರ ಅಭಿಮಾನಿಗಳು ಆಗಮಿಸಿದ್ದರು. ಚಿತ್ರರಂಗದ ಅನೇಕ ಕಲಾವಿದರು, ನಿರ್ಮಾಪಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಚುನಾವಣೆ ದಿನಾಂಕ ನಿಗದಿಯಾಗಿದ್ದರಿಂದ ಪುಣ್ಯಸ್ಮರಣೆಗೆ ನೀತಿ ಸಂಹಿತೆ ಕೂಡ ಅಡ್ಡಿಯಾಗಿದೆ. ಹಾಗಾಗಿ, ಸರಳವಾಗಿಯೇ ಪೂಜೆ ನೆರವೇರಿಸಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಎಸ್‌.ಎ. ಗೋವಿಂದರಾಜು, ಲಕ್ಷ್ಮೀ ಮತ್ತು ಪೂರ್ಣಿಮಾ ಸೇರಿ ಸಂಬಂಧಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next