Advertisement

ವರದಕ್ಷಿಣೆ ಪದದ ವ್ಯಾಪ್ತಿ ವಿಸ್ತಾರವಾಗಲಿ: ಸುಪ್ರೀಂಕೋರ್ಟ್‌ ಕೋರ್ಟ್‌

11:48 PM Jan 13, 2022 | Team Udayavani |

ನವದೆಹಲಿ: ವರದಕ್ಷಿಣೆ ಪದದ ವ್ಯಾಪ್ತಿ ಮತ್ತಷ್ಟು ವಿಸ್ತಾರಗೊಳಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಪತಿಯ ಮನೆಯವರು ಪತ್ನಿಯ ಬಳಿ ಮನೆ ಕಟ್ಟಲು ಹಣ ನೀಡುವಂತೆ ಸೂಚನೆ ನೀಡಿದರೂ, ಅದನ್ನು ವರದಕ್ಷಿಣೆ ವ್ಯಾಪ್ತಿಗೆ ತರಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾ.ಎ.ಎಸ್‌.ಬೋಪಣ್ಣ ಮತ್ತು ನ್ಯಾ.ಹಿಮಾ ಕೋಲಿ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ತೊಡೆದು ಹಾಕುವ ನಿಟ್ಟಿನಲ್ಲಿ ಸೂಕ್ತ ಪ್ರಯತ್ನಗಳು ನಡೆಯಬೇಕಾಗಿದೆ ಎಂದಿದೆ. ಮಧ್ಯಪ್ರದೇಶದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next