Advertisement

ಉಡುಪಿ: ವರದಕ್ಷಿಣೆ ಕಿರುಕುಳ; ದೂರು ದಾಖಲು

06:39 PM Jul 21, 2022 | Team Udayavani |

ಉಡುಪಿ: ದೊಡ್ಡಣಗುಡ್ಡೆ ಕುಂಜಿಬೆಟ್ಟು ನಿವಾಸಿ ಶಾಹಿದಾ ಬಾನು ಅವರು 2020ರಲ್ಲಿ ಬ್ರಹ್ಮಾವರದ ಹಾರಾಡಿ ಕುಕ್ಕುಡೆಯ ನಿವಾಸಿ ಮೊಹಮ್ಮದ್‌ ಶಾರೀಕ್‌ ಜತೆಗೆ ವಿವಾಹವಾಗಿದ್ದು, ಪತಿ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ, ಹಲ್ಲೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Advertisement

ಮದುವೆಯ ಸಮಯದಲ್ಲಿ 10 ಪವನ್‌ ಚಿನ್ನಾಭರಣ, 3 ಲಕ್ಷ ರೂ. ನಗದು ನೀಡಿ, ಮದುವೆ ಖರ್ಚನ್ನು ಶಾಹಿದಾ ಅವರ ಮನೆಯವರೇ ಮಾಡಿದ್ದರು. ಮದುವೆ ಅನಂತರ ಕುಕ್ಕುಡೆಯಲ್ಲಿ ವಾಸವಿದ್ದು, 10 ತಿಂಗಳ ಹೆಣ್ಣು ಮಗುವಿದೆ. ವರದಕ್ಷಿಣೆ ಹಣ ಕಡಿಮೆಯಾಗಿದ್ದು, ಇನ್ನೂ ಹೆಚ್ಚಿನ ಚಿನ್ನಾಭರಣಕ್ಕಾಗಿ ಬೇಡಿಕೆ ಇಟ್ಟು ಪತಿ ಶಾರೀಕ್‌ ಮತ್ತು ಪತಿ ಮನೆಯವರಾದ ಅಬೂಬಕ್ಕರ್‌, ಜುಬೇದ, ಅಲ್‌ ಸುಹೇಬ್‌, ಅಲ್‌ ಸುಹಾನ್‌, ಅಲ್‌ ಸಿಮಾನ್‌ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ.

ದೈಹಿಕ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ. ಮದುವೆಯ ಮುಂಚೆ ಸುಳ್ಳು ಹೇಳಿ 2 ಸರ ಮತ್ತು 2 ಕಿವಿ ಓಲೆಯನ್ನು ಹಾಗೂ ಮದುವೆಯ ಅನಂತರ ಎಲ್ಲ ಚಿನ್ನಾಭರಣಗಳನ್ನು ತೆಗೆದುಕೊಂಡಿದ್ದಾರೆ. ಹಾರಾಡಿ ಹೊನ್ನಾಳದ ನಿವಾಸಿ ಸುಬಾನ್‌ ಗಲಾಟೆ ಮಾಡಲು ಪ್ರಚೋದನೆಯನ್ನು ನೀಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಖಾಸಗಿ ದೂರಿನ ಮೂಲಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next