Advertisement

ದುಪ್ಪಟ್ಟು ಟೋಲ್‌ ಶುಲ್ಕಕ್ಕೆ ವಿರೋಧ: ಸಚಿವ, ಶಾಸಕರಿಗೆ ಮನವಿ

12:16 AM Dec 04, 2022 | Team Udayavani |

ಉಡುಪಿ: ರದ್ದಾದ ಸುರತ್ಕಲ್‌ ಟೋಲ್‌ ಕೇಂದ್ರದ ಸುಂಕವನ್ನು ಹೆಜಮಾಡಿಯ ಟೋಲ್‌ ಗೇಟ್‌ನಲ್ಲಿ ಸಂಗ್ರಹಿಸಲು ಅವಕಾಶ ನೀಡಬಾರದು. ಈ ಬಗ್ಗೆ ತತ್‌ಕ್ಷಣವೇ ವಿವಿಧ ಸಂಘಟನೆಗಳ ಸಭೆಯನ್ನು ಜಿಲ್ಲಾಡಳಿತ ನಡೆಸಬೇಕು ಎಂದು ಆಗ್ರಹಿಸಿ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಮೂಲಕ ಜಿಲ್ಲಾಧಿಕಾರಿಗೆ ಅಪರ ಜಿಲ್ಲಾಧಿಕಾರಿಗಳ ಮೂಲಕ ಶನಿವಾರ ಮನವಿ ನೀಡಲಾಯಿತು.

Advertisement

ಸುರತ್ಕಲ್‌ ಅಕ್ರಮ ಟೋಲ್‌ ಸುಂಕವನ್ನು ಹೆಜಮಾಡಿ, ತಲಪಾಡಿ, ಬ್ರಹ್ಮರಕೂಟ್ಲುವಿನಲ್ಲಿ ಹಂಚಿಕೆಮಾಡಿ ಸಂಗ್ರಹಿಸುವ ಸಲಹೆಯನ್ನು ಉಡುಪಿಯ ಜನಪ್ರತಿನಿಧಿಗಳು ನೀಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಸರಿಯಲ್ಲ. ಸುರತ್ಕಲ್‌ ಟೋಲ್‌ ಸುಂಕವನ್ನು ಪೂರ್ತಿ ರದ್ದುಗೊಳಿಸ ಬೇಕು ಎಂದು ಆಗ್ರಹಿಸಲಾಯಿತು.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ, ಸಹಸಂಚಾಲಕ ಶೇಖರ ಹೆಜಮಾಡಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಪ್ರಮುಖರಾದ ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ರಮೇಶ್‌ ಕಾಂಚನ್‌, ಪ್ರಖ್ಯಾತ್‌ ಶೆಟ್ಟಿ, ಕವಿರಾಜ್‌ ಎಸ್‌., ಪ್ರಶಾಂತ್‌ ಪೂಜಾರಿ, ಶರತ್‌ ಶೆಟ್ಟಿ, ಶ್ರೀನಿವಾಸ್‌ ಹೆಬ್ಟಾರ್‌, ಸಾಯಿರಾಜ್‌ ಕಿದಿಯೂರು, ಯತೀಶ್‌ ಕರ್ಕೇರ ಮೊದಲಾದವರಿದ್ದರು.

ಸಚಿವ, ಶಾಸಕರಿಗೆ ಮನವಿ
ಅನಧಿಕೃತ ಸುರತ್ಕಲ್‌ ಟೋಲ್‌ಗೇಟನ್ನು ರದ್ದುಮಾಡಿ ಅದರ ಸಂಪೂರ್ಣ ಶುಲ್ಕವನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಸೂಲಿ ಮಾಡುವ ಆದೇಶವನ್ನು ರದ್ದುಮಾಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶ‌ನ್‌ ವತಿಯಿಂದ ಸಚಿವ ಸುನಿಲ್‌ ಕುಮಾರ್‌, ಶಾಸಕ ಕೆ.ರಘುಪತಿ ಭಟ್‌, ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಅವರಿಗೆ ತಾ.ಪಂ. ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಕಾರ್ಯನಿರತ ಅಧ್ಯಕ್ಷ ಪಿ. ಹರಿದಾಸ್‌ ಭಟ್‌, ಪ್ರಧಾನ ಕಾರ್ಯದರ್ಶಿ ರಮೇಶ್‌ ಕೋಟ್ಯಾನ್‌ ಕಟಪಾಡಿ, ಖಜಾಂಚಿ ಪ್ರಕಾಶ್‌ ಅಡಿಗ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next