Advertisement

Dotihala: ವಿದ್ಯುತ್‌ ಅವಗಡ, 10 ಕ್ಕೂ ಹೆಚ್ಚು ಜಾನುವಾರು ಬಲಿ

01:18 PM May 30, 2023 | Team Udayavani |

ದೋಟಿಹಾಳ: ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಳಮಳ್ಳಿ ತಾಂಡದಲ್ಲಿ ಮೇ.30ರ ಮಂಗಳವಾರ ಬೆಳಿಗ್ಗೆ ವಿದ್ಯುತ್ ಸರ್ಕ್ಯೂಟ್ ಉಂಟಾಗಿ ತೋಟದ ಮನೆಯ ಹತ್ತಿರ ಕಟ್ಟಲಾದ ಎರಡು ಎಮ್ಮೆ, ಎರಡು ಎತ್ತು ಹಾಗೂ ಏಳು ಆಕಳು ಸೇರಿದಂತೆ ಒಟ್ಟು 11 ಜಾನವಾರಗಳು ಮೃತಪಟ್ಟಿವೆ.

Advertisement

ಕಳಮಳ್ಳಿ ತಾಂಡದ ಭದ್ರಪ್ಪ ಲಮಾಣಿ ಎಂಬವರಿಗೆ ಸೇರಿದ ಎಮ್ಮೆಗಳು ಹಾಗೂ ರಾಮಪ್ಪ ಲಮಾಣಿ ಎಂಬವರಿಗೆ ಸೇರಿದ ಏಳು ಆಕಳು ಹಾಗೂ ಎರಡು ಎತ್ತುಗಳು ವಿದ್ಯುತ್‌ ಸರ್ಕ್ಯೂಟ್ ಉಂಟಾಗಿ ಮೃತಪಟ್ಟಿವೆ.

ಮಳೆಯಾದ ಹಿನ್ನಲೆಯಲ್ಲಿ ಕಂಬದ ಮೇಲಿನ ಸರ್ವಿಸ್ ವೈಯರ್ ತುಂಡಾಗಿ ಕೆಳಕ್ಕೆ ಬಿದ್ದು ಈ ಘಟನೆ ನಡೆದಿದೆ.

ಸ್ಥಳಕ್ಕೆ ಕೆಇವಿ ಎಇಇ, ತಾವರಗೇರಾ ಪಿಎಸ್ಐ ಹಾಗೂ ತಹಶೀಲ್ದಾರ್ ಭೇಟಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next