Advertisement

Dotihala Crime: ವ್ಯಕ್ತಿಯ ಕೊಲೆಗೈದು ಪರಾರಿಯಾದ ದುಷ್ಕರ್ಮಿಗಳು

12:42 PM Sep 25, 2023 | Team Udayavani |

ದೋಟಿಹಾಳ: ದುಷ್ಕರ್ಮಿಗಳು ಓರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದು ಘಟನೆ ಸೆ.24ರ ಭಾನುವಾರ ತಡರಾತ್ರಿಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಲಿಹಾಳ ಗ್ರಾಮದ ಮುದೇನೂರ ರಸ್ಎಯ ಪಕ್ಕದಲ್ಲಿ ನಡೆದಿದೆ.

Advertisement

ತಾಲೂಕಿನ ಜಾಲಿಹಾಳ ಗ್ರಾಮದ ನಿವಾಸಿ ಭಾಗಪ್ಪ ತಂದಿ ಹನಮಪ್ಪ ಕ್ಯಾದಗುಂಪಿ (34) ಕೊಲೆಯಾದ ವ್ಯಕ್ತಿ. ಈತ ಗೌಂಡಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಜಾಲಿಹಾಳ ಗ್ರಾಮದ ಹೊರವಲಯದ ಮುದೇನೂರ ರಸ್ತೆ ಪಕ್ಕದಲ್ಲಿ ಈ ಘಟನೆ ನಡೆದಿದ್ದು, ಕೊಲೆಗೈದ ವ್ಯಕ್ತಿ ಪರಾರಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣಗಳು ಇನ್ನೂ ತಿಳಿದು ಬಂದಿಲ್ಲ.

ಸ್ಥಳಕ್ಕೆ ಕುಷ್ಟಗಿ ಪೋಲಿಸ್ ಠಾಣೆಯ ಸಿಪಿಐ ಪಿಎಸ್ಐ ಹಾಗೂ ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಮುದ್ದುರಂಗಸ್ವಾಮಿ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತನಿಖಾ ತಂಡ ಹಾಗೂ ಶ್ವಾನದಳದವರು ಹಾಗೂ ತನಿಖೆ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next