Advertisement

Dotihal: ಹಳ್ಳಕ್ಕೆ ಬಿದ್ದ ಮಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್

06:37 PM Oct 15, 2023 | Team Udayavani |

ದೋಟಿಹಾಳ: ಕುಷ್ಟಗಿ ತಾಲ್ಲೂಕಿನ ಮಿಯ್ಯಾಪೂರ ಗ್ರಾಮದ‌ ಹತ್ತಿರ ಇರುವ ಹಳ್ಳದಲ್ಲಿ ದೋಟಿಹಾಳದಿಂದ ಮಂಗಳೂರು ಹೋಗುವ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಘಟನೆ ರವಿವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.‌

Advertisement

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು 3ನೇ ಡಿಪೋದ ಕೆಎ:57 ಎಫ್:4537 ಬಸ್ ದೋಟಿಹಾಳ ಗ್ರಾಮದಿಂದ ಹನುಮಸಾಗರ ಮಾರ್ಗವಾಗಿ ಮಂಗಳೂರಿಗೆ ಹೋಗುವ ಸಾರಿಗೆ ಬಸ್ ಮಿಯ್ಯಾಪೂರ ಗ್ರಾಮದ ಬಳಿಯ ಹಳ್ಳದಲ್ಲಿ ಬಿದ್ದಿದ್ದೆ. ಹಳ್ಳದ ಎರಡು ಬದಿಗಳಲ್ಲಿ ತಡೆಗೋಡೆ ಇಲ್ಲದೆ‌ ಇರುವದು ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ.

ಈ ಬಸ್ಸಿನಲ್ಲಿ ದೋಟಿಹಾಳ, ಕಲಿಕೇರಿ ಕ್ಯಾದಗುಪ್ಪಾ, ಮೇಣಸಗೇರಿ ಹಾಗೂ ಮಿಯಾಪೂರು ಗ್ರಾಮದ ಪ್ರಯಾಣಿಕರು ಸೇರಿದಂತೆ ಸುಮಾರು 20 ಕ್ಕೆ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭಿಸಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು ತಾಲೂಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

‌ಸ್ಥಳಕ್ಕೆ ಹನುಮಸಾಗರ, ಕುಷ್ಟಗಿ ಪಿಎಸೈ ಹಾಗೂ ಕುಷ್ಟಗಿ ಸಾರಿಗೆ ಡಿಪೋದ ಸಿಬ್ಬಂದಿಗಳು ಭೇಟಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next