Advertisement

ಕಾಂಗ್ರೆಸ್ ನವರು ನಿಯಮ ಮೀರುತ್ತಾರೆಂದು ನೀವೂ ಮಾಡಬೇಡಿ : ಬಿಜೆಪಿಗರಿಗೆ ಸಿಎಂ

06:15 PM Jan 05, 2022 | Team Udayavani |

ಬೆಂಗಳೂರು : ಕಾಂಗ್ರೆಸ್ ನವರು ನಿಯಮ ಮೀರಿ ಪಾದಯಾತ್ರೆ ಮಾಡುತ್ತಾರೆಂದು ನೀವೂ ಅದೇ ಮಾರ್ಗ ತುಳಿಯಬೇಡಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಬಿಜೆಪಿ ಮುಖಂಡರಿಗೆ ಸೂಚನೆ ನೀಡಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ. ನಿಯಮಾವಳಿಯ ಪ್ರಕಾರ ಕಾರ್ಯಕ್ರಮ ಆಯೋಜನೆ ಮಾಡಿ. ಜೊತೆಗೆ ಕೋವಿಡ್ ಮೊದಲ ಎರಡನೇ ಅಲೆ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಎಲ್ಲಾ ಪಕ್ಷದವರಿಗಿಂತ ಮೊದಲು ಕೆಲಸ ಮಾಡಿದ್ದೀರಿ. . ಈಗಲೂ ಹಾಗೆ ಮಾಡಿ. ಜನರ ಸೇವೆ ಮಾಡುವ ಮೂಲಕ ಜನತೆಗೆ ನೆರವಾಗಿ ಎಂದು ಮನವಿ ಮಾಡಿದ್ದಾರೆ.

ಈ ಹಿಂದೆ ಮಾಡಿದಂತೆ ಪ್ರತಿ ವಾರ್ಡ್ ಗಳಲ್ಲೂ ಕೋವಿಡ್ ನಿರ್ವಹಣೆಗೆ ಸಮಿತಿ ಮಾಡಿ. ಪಕ್ಷದ ಶಾಸಕರು ಇಲ್ಲದ ಜಾಗದಲ್ಲಿ ಎಂಎಲ್ ಸಿಗಳನ್ನು  ನೇಮಕ ಮಾಡೋಣ. ಅವರ ಜೊತೆ ಪಕ್ಷದ ಕಾರ್ಯಕರ್ತರು ಸೇರಿಕೊಳ್ಳಿ ಎಂದು ಸಿಎಂ ಸೂಚನೆ ನೀಡಿದರು.

ಗಮನದಲ್ಲಿ ಇದೆ

ಬೆಂಗಳೂರಿನ ಸಮಸ್ಯೆಗಳ ಬೆಂಗಳೂರು ನಗರ ಅಧ್ಯಕ್ಷ ಮಂಜುನಾಥ್ ಪ್ರಶ್ನೆ ಮಾಡಿದಾಗ ಬೆಂಗಳೂರು ಅಭಿವೃದ್ಧಿ ಬಗ್ಗೆ ಪ್ರತ್ಯೇಕ ಪ್ರಶ್ನೆ ಬೇಡ, ಅದು ನನ್ನ ಗಮನದಲ್ಲಿ ಇದೆ ಎಂದರು.

Advertisement

ದಂಡ ಗಮನಕ್ಕೆ ಬಂದಿದೆ
ಬೆಂಗಳೂರು ನಗರದಲ್ಲಿ ಪೊಲೀಸ್ ಕಂಡ ಕಂಡಲ್ಲಿ ದಂಡ ಹಾಕುತ್ತಿರುವುದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಿಎಂ ಹೌದು ಅದು ನನ್ನ ಗಮನಕ್ಕೆ ಬಂದಿದೆ. ಸರಿ ಮಾಡೋಣ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next