Advertisement

ರಾಷ್ಟ್ರೀಯ ಪಕ್ಷಗಳನ್ನು ನಂಬಬೇಡಿ: H.D ದೇವೇಗೌಡರ ಮನವಿ

12:42 AM Apr 26, 2023 | Team Udayavani |

ಮೈಸೂರು: ರಾಜ್ಯದ ನೀರಾವರಿ ಯೋಜನೆಗಾಗಿ ಕೈ ನಡುಗುತ್ತಿದ್ದರೂ ರಾಜ್ಯಸಭೆಯಲ್ಲಿ ಹೋರಾಟ ಮಾಡಿದ ನನ್ನ ಕೈಯನ್ನು ಹಿಡಿದ ಪ್ರಧಾನಮಂತ್ರಿ ತಮಿಳುನಾಡಿನಲ್ಲಿ ಅತೀ ಹೆಚ್ಚು ಸಂಸದರು ಹೊಂದಿರುವುದರಿಂದ ನಾನು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಎಂದು ತಿಳಿಸಿದ್ದರೆಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ನೆನಪುಗಳನ್ನು ಮೆಲುಕು ಹಾಕಿದರು.

Advertisement

ಕೆ.ಆರ್‌. ನಗರ ವಿಧಾನಸಭಾ ವ್ಯಾಪ್ತಿಯ ಸಾಲಿಗ್ರಾಮ ತಾಲೂಕಿನ ಮಿಲೇì, ಸಾಲಿಗ್ರಾಮ, ಹೊಸೂರು ಗ್ರಾಮಗಳಲ್ಲಿ ಚುನಾವಣ ಪ್ರಚಾರ ನಡೆಸಿ ಮಾತನಾಡಿದರು. ರಾಷ್ಟ್ರೀಯ ಪಕ್ಷಗಳು ಎಂದಿಗೂ ರಾಜ್ಯಕ್ಕೆ ಅನುಕೂಲ ಮಾಡದೇ ಮಲತಾಯಿ ಧೋರಣೆ ಅನುಸರಿಸಿದವು. ಎಂದಿಗೂ ಅವನ್ನು ನಂಬಬೇಡಿ ಎಂದರು.

ರಾಜ್ಯದಲ್ಲಿ ಮಹಿಳಾ ಮೀಸಲಾತಿ, ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಕೊಟ್ಟಿದ್ದರಲ್ಲಿ ನಮ್ಮ ಕೊಡುಗೆ ಇದೆ. ಈ ರಾಜ್ಯದಲ್ಲಿ ಪರಿಶಿಷ್ಟ ಪಂಗಡ, ಮುಸ್ಲಿಂ ಸಮುದಾಯ, ಮಹಿಳೆಯರು ಸ್ಥಳೀಯ ಸಂಸ್ಥೆಯಲ್ಲಿ ಮೀಸಲಾತಿ ಪಡೆದಿದ್ದರೆ ಅದಕ್ಕೆ ನಾನು ಕಾರಣ ಎಂಬುದನ್ನು ಮರೆಯದಿರಿ ಎಂದು ಮನವಿ ಮಾಡಿದರು.

ಕ್ಷೇತ್ರದ ಬಹುತೇಕ ಬರಡು ಭೂಮಿಗೆ ನೀರೊದಗಿಸುವ ಹಾರಂಗಿ ನಾಲೆಯನ್ನು ನಿರ್ಮಾಣ ಮಾಡಲು ಕೇಂದ್ರದ ಯಾವುದೇ ಅನುದಾನವಿಲ್ಲದೇ ಕರ್ನಾಟಕದ ರೈತರ ಸರ್ಕಾರದ ಹಣದಿಂದಲೇ ನಾನು ಮತ್ತು ಪಕ್ಷ ಮಾಡಿದ್ದು ಎಂಬುದನ್ನು ಈ ಭಾಗದ ಜನತೆ ಅರಿತುಕೊಳ್ಳಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ದೇವೇಗೌಡರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next