Advertisement
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಿರುವ ಮಹಾಜನ್ ವರದಿಯನ್ನು ಎಲ್ಲೆಡೆ ಒಪ್ಪಿಕೊಳ್ಳಲಾಗಿದೆ. ಇಷ್ಟಾದರೂ ಅಗತ್ಯ ಬಿದ್ದಾಗ ಮತ್ತೆ ಪ್ರಸ್ತಾವಿಸುವ ಮಹಾರಾಷ್ಟ್ರ ವಿನಾ ಕಾರಣ ಗೊಂದಲವನ್ನು ಸೃಷ್ಟಿಸುತ್ತಲೇ ಇರುವುದು ಖಂಡನೀಯ. ಬೆಳಗಾವಿ ಹೋರಾಟವನ್ನೇ ಅಲ್ಲಿನ ಮುಖ್ಯಮಂತ್ರಿ ಏಣಿಯಾಗಿ ಮಾಡಿಕೊಂಡಿದ್ದನ್ನು ಮರೆಯುವ ಹಾಗಿಲ್ಲ. ಈ ಬಾರಿಯಂತೂ ಯಾವುದೇ ಪ್ರಚೋದನೆ ಇಲ್ಲದೆ ಮಹಾರಾಷ್ಟ್ರ ಸರಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿ ಮತ್ತೆ ನ್ಯಾಯಾಂಗವನ್ನು ಎಳೆದುತರಲು ಮುಂದಾಗಿದೆ. ಅಷ್ಟೇ ಆಗಿದ್ದರೆ ಚಿಂತೆ ಇರಲಿಲ್ಲ. ಕಾನೂನು ಮಟ್ಟದಲ್ಲಿ ಹೋರಾಟಕ್ಕೆ ಕರ್ನಾಟಕವೂ ಸಜ್ಜಾಗಬಹುದಿತ್ತು. ಆದರೆ ಲಕ್ಷ್ಮಣ ರೇಖೆಯನ್ನು ದಾಟಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಹಾರಾಷ್ಟ್ರ, ಇಬ್ಬರು ಸಚಿವರನ್ನು ಬೆಳಗಾವಿಗೆ ಕಳುಹಿಸಲು ನಿರ್ಧರಿಸಿದ್ದು ಅತಿರೇಕವೇ. ತನ್ನ ವ್ಯಾಪ್ತಿಯಲ್ಲಿಲ್ಲದ ಪ್ರದೇಶಕ್ಕೆ ತನ್ನ ಸಚಿವರನ್ನು ಕಳುಹಿಸಿ ಅಲ್ಲಿ ಬೆಂಕಿ ಹಚ್ಚುವ ಪ್ರಯತ್ನಕ್ಕೆ ಕೈ ಹಾಕುವುದನ್ನು ಯಾವ ಒಕ್ಕೂಟ ವ್ಯವಸ್ಥೆಯಲ್ಲೂ ಸಹಿಸಿಕೊಳ್ಳುವಂಥದ್ದಲ್ಲ.
Advertisement
ಜನರ ಬದುಕು ನಿರ್ವಹಣೆಗೆ ಗಡಿ ವಿವಾದ ಅಡ್ಡಿಯಾಗದಿರಲಿ
11:50 PM Dec 07, 2022 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.