Advertisement

ರಾಜಕೀಯ ಎಂಟ್ರಿ ಸುದ್ದಿ ಸುಳ್ಳಲ್ಲ

03:45 AM Jun 23, 2017 | Team Udayavani |

ಚೆನ್ನೈ: ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ರಾಜಕೀಯ ಪ್ರವೇಶ ಬಗ್ಗೆ ಹಲವು ಅಂತೆಕಂತೆಗಳಿದ್ದವು. ಈಗ ಸ್ವತಃ ಅವರೇ “ರಾಜಕೀಯ ಪ್ರವೇಶ ಮಾಡುವುದನ್ನು ತಳ್ಳಿ ಹಾಕುವುದಿಲ್ಲ’ ಎಂದಿದ್ದಾರೆ.

Advertisement

ಈ ಬಗ್ಗೆ ಶೀಘ್ರವೇ ಘೋಷಣೆ ಮಾಡಲಿದ್ದೇನೆ ಎಂದಿದ್ದಾರೆ. ಹೀಗಾಗಿ, ಅವರ ಮಾತುಗಳಿಗೆ ಮಹತ್ವ ಬಂದಿದೆ. ಕಳೆದ ತಿಂಗಳು ಅಭಿಮಾನಿಗಳ ಜತೆ ಸಭೆ ನಡೆಸಿದ್ದ ತಲೈವಾ ಮತ್ತೆ ಅಕ್ಟೋಬರ್‌ನಲ್ಲಿ ಅದೇ ಮಾದರಿ ಸಭೆ ನಡೆಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಅಭಿಮಾನಿಗಳ ಜತೆ 16 ರೈತ ಸಂಘಗಳ ಪ್ರತಿನಿಧಿಗಳೂ ಅದರಲ್ಲಿ ಭಾಗವಹಿಸಿದ್ದವು.

ಮೈತ್ರಿಗೆ ಒಲವು: ಇನ್ನೊಂದೆಡೆ, ಎಡಪ್ಪಾಡಿ ಪಳನಿಸ್ವಾಮಿ ತಮಿಳು ನಾಡು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ನಂತರ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಸುಳಿವು ಬಿಟ್ಟುಕೊಡದಂತೆ ಗೌಪ್ಯತೆ ಕಾಯ್ದುಕೊಂಡಿದ್ದರೆ, ಇತ್ತ ಅವರ ಎದುರಾಳಿ ಬಣದ ಮುಖಂಡ, ಮಾಜಿ ಸಿಎಂ ಪನ್ನೀರ್‌ ಸೆಲ್ವಂ ಕೂಡ ಮೌನದಿಂದಲೇ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ಆದರೆ ಬಹಳ ದಿನಗಳ ನಂತರ “ಇಂಡಿಯಾ ಟುಡೆ’ಗೆ ಸಂದರ್ಶನ ನೀಡಿರುವ ಪನ್ನೀರ್‌, ತಮಿಳು ನಾಡು ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಮೆಗಾಸ್ಟಾರ್‌ ರಜನಿಕಾಂತ್‌ ಜತೆ ಸೇರುವ ಸುಳಿವನ್ನೂ ನೀಡಿದ್ದಾರೆ.

ರಜನಿ ರಾಜಕೀಯ ಪ್ರವೇಶಿಸುವ ಕುರಿತು ಮಾತನಾಡಿರುವ ಪನ್ನೀರ್‌ಸೆಲ್ವಂ, “ಯಾವುದೇ ಪಕ್ಷ ಸೇರುವುದು, ಬಿಡುವುದು ವರವರ ವೈಯಕ್ತಿಕ ನಿರ್ಧಾರ. ಆದರೆ ಅಗತ್ಯಬಿದ್ದರೆ ಮೆಗಾಸ್ಟಾರ್‌ ಜತೆ ಕೈಜೋಡಿಸಲು ಕೂಡ ನಾವು ಸಿದ್ಧ,’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next