Advertisement

“ಮಂತ್ರಿ ಮಾಡದ್ದಕ್ಕೆ ಅತೃಪ್ತಿ ಹೊರ ಹಾಕಬೇಡಿ’

10:51 PM Aug 24, 2019 | Lakshmi GovindaRaj |

ಸಿರಿಗೆರೆ: ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವೆಂದು ಅತೃಪ್ತಿ ಹೊರ ಹಾಕಿ ಸಭೆ-ಸಮಾರಂಭಗಳಿಂದ ದೂರ ಉಳಿಯುವುದು ಸರಿಯಲ್ಲ ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.

Advertisement

ಸಿರಿಗೆರೆ ಬ್ರಹನ್ಮಠದಲ್ಲಿ ಶನಿವಾರ ನಡೆದ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ರೈತರ ಸಮಾವೇಶದ ನಂತರ ಶಾಂತಿವನದಲ್ಲಿ ಭೋಜನಕ್ಕೆ ತೆರಳಿದ ವೇಳೆ ಬಿಜೆಪಿ ಶಾಸಕರಾದ ಹೊಳಲ್ಕೆರೆಯ ಎಂ.ಚಂದ್ರಪ್ಪ ಹಾಗೂ ಚನ್ನಗಿರಿಯ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಈ ಕಿವಿಮಾತು ಹೇಳಿದ್ದಾರೆ. ಅತೃಪ್ತಿ ಎಂಬುದು ಪ್ರಜಾಪ್ರಭುತ್ವ ಪಾಲನೆಯ ಲಕ್ಷಣವಲ್ಲ.

ಶಾಸಕರಾಗಿ ತಮ್ಮ ಕ್ಷೇತ್ರದಲ್ಲಿನ ಜವಾಬ್ದಾರಿಯುತ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ರಾಜಕೀಯ ಧುರೀಣರಾದ ನಿಮ್ಮ ಹೊಣೆಗಾರಿಕೆ. ಮಂತ್ರಿಗಿರಿ ಪಡೆದುಕೊಳ್ಳುವುದಕ್ಕಿಂತ ಕ್ಷೇತ್ರಗಳ ಅಭಿವೃದ್ಧಿಗೆ ಏನಾಗಬೇಕೆಂಬುದರ ಕಡೆಗೆ ಗಮನ ಹರಿಸುವುದು ಒಳ್ಳೆಯದು ಎಂದರು. ನಿಮ್ಮ ನಾಯಕರನ್ನು ಭೇಟಿ ಮಾಡಿ, ನಮ್ಮನ್ನು ಮಂತ್ರಿಗಳನ್ನಾಗಿ ಮಾಡೋದು, ಬಿಡೋದು ನಿಮಗೆ ಬಿಟ್ಟಿದ್ದು. ನಾವು ನಮ್ಮ ಕ್ಷೇತ್ರದ ಕೆಲಸಗಳತ್ತ ಗಮನ ಹರಿಸುತ್ತೇವೆ ಎಂದು ತಿಳಿಸಬೇಕು ಎಂದು ಸ್ವಾಮೀಜಿಯವರು ಸ್ಥಳದಲ್ಲಿದ್ದ ಶಾಸಕರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next