Advertisement

ಶಿರೂರಿನ ಇನ್ನೊಂದು ದೋಣಿ ಎರ್ಮಾಳಿನಲ್ಲಿ ಪತ್ತೆ

08:50 AM Aug 08, 2022 | Team Udayavani |

ಪಡುಬಿದ್ರಿ : ಬೈಂದೂರು, ಗಂಗೊಳ್ಳಿ ಭಾಗದಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಹಲವು ದೋಣಿಗಳು ಕೊಚ್ಚಿಹೋಗಿದ್ದು, ಆ ಪೈಕಿ ಇನ್ನೊಂದು ಕಿರು ದೋಣಿ ಎರ್ಮಾಳು ಬಡಾ ಸಮುದ್ರ ಕಿನಾರೆಯಲ್ಲಿ ರವಿವಾರ ಪತ್ತೆಯಾಗಿದೆ.

Advertisement

ಗ್ರಾ.ಪಂ. ಸದಸ್ಯ ಶಿವಕುಮಾರ್‌ ಉಚ್ಚಿಲ ಮತ್ತು ಸಹೋದರ ಅದನ್ನು ದಡಕ್ಕೆ ತಂದು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಿರೂರಿನ ಅಬ್ದುಲ್‌ ಖಾದಿರ್‌ ಅವರಿಗೆ ಸೇರಿದ ದೋಣಿ ಇದಾಗಿದ್ದು, ಅವರು ಎರ್ಮಾಳಿಗೆ ಬಂದು ರಸ್ತೆ ಮಾರ್ಗದ ಮೂಲಕ ಶಿರೂರಿಗೆ ಕೊಂಡೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಡುಕರೆಗೆ ತೇಲಿಬಂದ ದೋಣಿ ಮುರುಡೇಶ್ವರದ್ದು
ಕಟಪಾಡಿ: ಉದ್ಯಾವರ ಪಡುಕರೆಯ ಸಮುದ್ರ ಕಿನಾರೆಯಲ್ಲಿ ಶನಿವಾರ ಪತ್ತೆಯಾಗಿದ್ದ ಸಣ್ಣ ದೋಣಿಯ ಮುರುಡೇಶ್ವರದ್ದು ಎಂದು ತಿಳಿದುಬಂದಿದೆ. ರವಿವಾರ ಅದರ ಮಾಲಕರು ಬಂದು ರಸ್ತೆ ಮೂಲಕ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ : ಕಾಮನ್ವೆಲ್ತ್ ಗೇಮ್ಸ್: ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟ ಸಾಗರ್ ಅಹ್ಲಾವತ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next