Advertisement

ಗದುಗಿದೆ “ಡಾಲಿ’ಧನಂಜಯ

08:57 PM Jan 04, 2022 | Team Udayavani |

ಗದಗ: “ಬಡವ ರಾಸ್ಕಲ್‌’ ಚಿತ್ರದ ಪ್ರಚಾರಕ್ಕಾಗಿ “ಡಾಲಿ’ ಧನಂಜಯ ಅವರು ಸೋಮವಾರ ನಗರದ ಕೃಷ್ಣಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದು, ಅಭಿಮಾನಿಗಳು ಪುಷ್ಪ ವೃಷ್ಟಿಗೈಯುವ ಮೂಲಕ ನೆಚ್ಚಿನ ನಟನಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದರು.

Advertisement

ಪ್ರೇಕ್ಷಕರಿಂದ ತುಂಬಿದ್ದ ಚಿತ್ರಮಂದಿರ ವನ್ನು ಗಮನಿಸಿದ ಡಾಲಿ, ಪ್ರೇಕ್ಷಕರತ್ತ ಕೈಬೀಸಿ, ಕೈಮುಗಿದು ಆಶೀರ್ವಾದ ಕೋರಿದರು. ಇದಕ್ಕೂ ಮುನ್ನ ಕಾರಿನಲ್ಲಿ ನಿಂತು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಡಾಲಿ ಧನಂಜಯ, ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಸಂತಸ ತಂದಿದೆ.

ಉತ್ತರ ಕರ್ನಾಟಕದ ಜನರಿಂದಲೇ ಕನ್ನಡ ಸಿನಿಮಾಗಳು ಗೆಲ್ಲುತ್ತಿವೆ. ಅಭಿಮಾನಿಗಳ ಪ್ರೀತಿ ಸದಾ ಹಸಿರಾಗಿರಲಿ ಎಂದು ಮನವಿ ಮಾಡಿದರು. ಈ ವೇಳೆ ನೆಚ್ಚಿನ ನಾಯಕ ನಟನೊಂದಿಗೆ ಸೆಲಿ #à ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಕೆಲವರು ಕೈಕುಲಿಕಿ ಸಂಭ್ರಮಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next