Advertisement

ದೊಡ್ಡವಾಡ ತ್ರಿವಳಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

09:56 AM Jan 24, 2020 | keerthan |

ಬೆಳಗಾವಿ: ಬೈಲಹೊಂಗಲ ತಾಲೂಕಿನ ದೊಡ್ಡವಾಡದಲ್ಲಿ ಕಳೆದ ಜನವರಿ 18ರಂದು ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬೆಳಗಾವಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಜಮೀನು ವಿವಾದ ಸಂಬಂಧ ಈ ಕೊಲೆ ನಡೆದಿತ್ತು. ಅರೋಪಿಗಳ ಬಂಧನಕ್ಕೆ ಮೂರು ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿತ್ತು ಎಂದರು.

ಶಿವಪ್ಪ ಬಸಪ್ಪ ಭಗವಂತನವರ, ಗೋವಿಂದ ಶಿವಪುತ್ರಪ್ಪ ಸಂಗೊಳ್ಳಿ, ಬಸವಂತಪ್ಪ ಅಂಬಣ್ಣ ಅಂದಾನಶೆಟ್ಟಿ ಹಾಗೂ ಮಲ್ಲಿಕಾರ್ಜುನ ಅಂಬಣ್ಣ ಅಂದಾನಶೆಟ್ಟಿ ಬಂಧಿತ ಕೊಲೆ ಆರೋಪಿಗಳು ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಶಿವಪ್ಪ ಭಗವಂತನವರ ಪ್ರಮುಖ ಆರೋಪಿಯಾಗಿದ್ದು ಉಳಿದ ಮೂವರು ಕೊಲೆ ಸಂಚು ರೂಪಿಸುವಲ್ಲಿ ಸಹಾಯಮಾಡಿದ್ದರು. ಈ ಕೊಲೆ ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ  ಬೈಲಹೊಂಗಲ ಎಎಸ್ ಪಿ, ಕಿತ್ತೂರು ಸಿಪಿಐ ಬೈಲಹೊಂಗಲ ಸಿಪಿಐ ಹಾಗೂ ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗುವುದು ಎಂದು ಎಸ್ ಪಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next