Advertisement

ಗೋವಾದಲ್ಲಿ ಬಿಜೆಪಿಗೆ ವೈದ್ಯರು,ಎಂಜಿನೀಯರ್ ಗಳು ಬಲ ತುಂಬಲಿದ್ದಾರೆ: ತಾನಾವಡೆ

05:05 PM Apr 29, 2022 | Team Udayavani |

ಪಣಜಿ: ಪಕ್ಷವನ್ನು ಇನ್ನೂ ಬಲಪಡಿಸಲು ಗೋವಾದಲ್ಲಿ ಹಲವು ವೈದ್ಯರು,ಎಂಜಿನೀಯರ್ ಗಳು , ಹಲವು ಜನ ಸೇವಾ ನಿವೃತ್ತ ಅಧಿಕಾರಿಗಳು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಹೇಳಿದ್ದಾರೆ.

Advertisement

ದಕ್ಷಿಣ ಗೋವಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹೃದಯರೋಗ ತಜ್ಞ ಡಾ. ಮಿಲಿಂದ ದೇಸಾಯಿ ಬಿಜೆಪಿ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಗಣೇಶ ಗಾಂವಕರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಉಪಸ್ಥಿತರಿದ್ದರು.

ವಿವಿಧ ಗಣ್ಯರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಡಾ.ದೇಸಾಯಿ ರವರನ್ನು ಶೀಘ್ರದಲ್ಲಿಯೇ ಬಿಜೆಪಿ ವೈದ್ಯರ ಸೆಲ್‍ಗೆ ಸೇರಿಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. ಇದರಿಂದಾಗಿ ಈಗ ಬಿಜೆಪಿ ಸೇರುತ್ತಿರುವವರು ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುವ ಉದ್ದೇಶವನ್ನಿಟ್ಟುಕೊಂಡು ಬಿಜೆಪಿ ಸೇರುತ್ತಿಲ್ಲ ಎಂದು ತಾನಾವಡೆ ಹೇಳಿದರು.

ಬಿಜೆಪಿ ಸೇರ್ಪಡೆಯಾದ ಡಾ. ಮಿಲಿಂದ ದೇಸಾಯಿ ಮಾತಾಡಿ, ಆಸ್ಪತ್ರೆಯ ಮಾಲೀಕನಾದ ನನಗೆ ಜನರ ಹಾಗೂ ರಾಜಕಾರಣಿಗಳ ನೆರವು ಬೇಕು. ವೈದ್ಯಕೀಯ ಶಿಭಿರಗಳನ್ನು ಆಯೋಜಿಸುವ ಮೂಲಕ ನಾನು ಸಮಾಜಕ್ಕೆ ನನ್ನ ಕೊಡುಗೆ ನೀಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next