Advertisement

ರಾಜಕೀಯಕ್ಕೆ ಮಹದಾಯಿ ಬಳಸಿಕೊಳ್ಬೇಡಿ​​​​​​​

06:25 AM Nov 28, 2017 | Team Udayavani |

ನರಗುಂದ: “ಮೂರು ವರ್ಷಗಳಿಂದ ತೆಪ್ಪಗಿದ್ದ ಬಿ.ಎಸ್‌.ಯಡಿಯೂರಪ್ಪ ಇದೀಗ ಒಂದೇ ತಿಂಗಳಿನಲ್ಲಿ ಕಳಸಾ-ಬಂಡೂರಿ ನೀರು ಹರಿಸಲು ಮುಂದಾಗಿರುವುದನ್ನು ಸ್ವಾಗತಿಸುತ್ತೇವೆ. ನೀರು ತರುವ ಪ್ರಯತ್ನ ಮಾಡಿ, ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಸೋಮವಾರ ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ವಪಕ್ಷ ನಿಯೋಗದಲ್ಲಿ ತೆರಳಿದಾಗ ಕುಡಿಯಲು ನೀರು ಕೊಡಿ ಎಂದು ಪ್ರಧಾನಿಗೆ ಕೈಮುಗಿದು ಪ್ರಾರ್ಥಿಸಿದೆ. ಆಗ ನಾಡಿನ ಬಿಜೆಪಿ ನಾಯಕರು ತುಟಿ ಪಿಟಕ್‌ ಎನ್ನಲಿಲ್ಲ. ಕುಡಿವ ನೀರು ಕೇಳಿದರೆ ಅಲ್ಲಿನ ಪ್ರತಿಪಕ್ಷದವರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಒಕ್ಕೂಟ ವ್ಯವಸ್ಥೆ ಮುಖ್ಯಸ್ಥರಾದ ಪ್ರಧಾನಿಯೊಬ್ಬರು ಹೇಳುವುದು ದೇಶದ ಇತಿಹಾಸದಲ್ಲೇ ಮೊದಲು.ಈಗಾಗಲೇ ನ್ಯಾಯಾಧಿಕರಣದ ಅವ ಧಿ ವಿಸ್ತರಿಸಿ 2018ರ ಆಗಸ್ಟ್‌ನಲ್ಲಿ ಅಂತಿಮ
ತೀರ್ಪು ಕೊಡಬೇಕು ಎಂಬ ತೀರ್ಮಾನ ವಾಗಿದೆ. ಅಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಯಡಿಯೂರಪ್ಪನವರ ಕಾಂಗ್ರೆಸ್‌ ಮುಕ್ತ ಕರ್ನಾಟಕ ಉದ್ದೇಶ ದೇವರಾಣೆಗೂ ಸಾಧ್ಯವಿಲ್ಲ. ಮೆಕ್ಕೆಜೋಳ ಖರೀದಿಗೆ ನಾವು ಸಿದಟಛಿರಿದ್ದೇವೆ. ಆದರೆ ನಾವು ಖರೀದಿ ಮಾಡಿ ಪಡಿತರ ಮೂಲಕ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿಯಮಾವಳಿ ಇದೆ. ಈ ನಿಯಮ ತೆಗೆದು ಹಾಕುವಂತೆ ಒತ್ತಾಯ ಮಾಡಿದ್ದೇವೆ. ಆದರೆ ಇದಕ್ಕೆ ಕೇಂದ್ರದ ಒಪ್ಪಿಗೆಯಿಲ್ಲ. ಆದರೂ ನಾವು ಮೆಕ್ಕೆಜೋಳ ಖರೀದಿ ಮಾಡುವುದು ನಿಶ್ಚಿತ. ಈ ಬಗ್ಗೆ ಯಡಿಯೂರಪ್ಪನವರು ಕೇಂದ್ರದ ಮೇಲೆ ಒತ್ತಡ ಹೇರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ ಮಾತನಾಡಿ, ಬಿಜೆಪಿ ನಾಯಕರು ಪರಿವರ್ತನಾ ಯಾತ್ರೆ ಯುದ್ದಕ್ಕೂ ಸುಳ್ಳಿನ ಕಂತೆ ಕಟ್ಟುತ್ತ ಪ್ರವಾಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ಮಧ್ಯಸ್ಥಿಕೆಯೇ ಪರಿಹಾರ
ನರಗುಂದ
: ಕೇಂದ್ರ ಸರ್ಕಾರ ಮತ್ತು ಗೋವಾ, ಮಹಾರಾಷ್ಟ್ರ ಸರ್ಕಾರಗಳಿಗೆ ಹಲವಾರು ಬಾರಿ ಪತ್ರ ಬರೆದರೂ ಯಾವುದೇ ಸ್ಪಂದನೆ ದೊರಕುತ್ತಿಲ್ಲ. ಪ್ರಧಾನಿ ಮಧ್ಯಸ್ಥಿಕೆಯಿಂದ ಮಾತ್ರ ಮಹದಾಯಿ ವಿವಾದ ಬಗೆಹರಿಸಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಮಹದಾಯಿ ಹೋರಾಟಗಾರರಿಗೆ ಸ್ಪಷ್ಟಪಡಿಸಿದ್ದಾರೆ. ಮನವಿ ಅರ್ಪಣೆ ವೇಳೆ ರೈತರೊಂದಿಗೆ ಮಾತನಾಡಿದ ಅವರು, ಈಗ ಯಡಿಯೂರಪ್ಪನವರು ಒಂದು ತಿಂಗಳೊಳಗೆ ವಿವಾದ ಬಗೆಹರಿಸುವ ಭರವಸೆ ನೀಡಿದ್ದಾರೆ. ಕಾದು ನೋಡೋಣ. ಅವರು ಎಲ್ಲಿ ಕರೆದರೂ ಹೋಗಲು ನಾನು ಸಿದಟಛಿನಿದ್ದೇನೆ. ಪ್ರಧಾನಿ ಮೇಲೆ ಒತ್ತಡ ಹಾಕುವ ಕೆಲಸವನ್ನು ಬಿಜೆಪಿ ನಾಯಕರು ಮಾಡಲಿ ಎಂದರು. ಸಚಿವ ವಿನಯ ಕುಲಕರ್ಣಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿನಯ ಕುಲಕರ್ಣಿ ಅವರ ಹೆಸರು ಕೆಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.

ಹಿಂದೆ ಪ್ರಧಾನಿಯಿದ್ದಾಗ ಇಂದಿರಾ ಗಾಂಧಿ  ಅವರು ಜಲ ವಿವಾದಗಳನ್ನು ಮಧ್ಯಸ್ಥಿಕೆ ವಹಿಸಿ ಪರಿಹರಿಸಿದ ಉದಾಹರಣೆಗಳಿವೆ. ಆದರೆ ಅವರ ವಿಚಾರಧಾರೆ ಪ್ರಧಾನಿ ಮೋದಿ ಅವರಿಗೇಕಿಲ್ಲ? ಗಂಗಾ, ನರ್ಮದಾ ವಿಷಯದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಂಡ ಮಾದರಿಯಲ್ಲಿ ಮಹದಾಯಿ ವಿವಾದವನ್ನೂ ಬಗೆಹರಿಸಲು ಸಾಧ್ಯವಿದೆ. ಇದೀಗ ಯಡಿಯೂರಪ್ಪನವರು ವಿವಾದ ಬಗೆಹರಿಸುವ ಭರವಸೆ ನೀಡಿದ್ದಾರೆ. ಇದನ್ನು ಸ್ವಾಗತಿಸುತ್ತೇವೆ. ಡಿ.15ರ ಬಳಿಕ ಎಲ್ಲರೂ ಸೇರಿ ನಿರ್ಧಾರ ತೆಗೆದುಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ 
– ಎಂ.ಬಿ. ಪಾಟೀಲ, ಜಲ ಸಂಪನ್ಮೂಲ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next