Advertisement

ರುಂಡ ಬೇಡ, ನೈತಿಕತೆ ಇದ್ದರೆ ರಾಜೀನಾಮೆ ಕೊಡಿ: ರೇವಣ್ಣ

07:15 AM Jul 25, 2017 | Team Udayavani |

ಹಾಸನ:”ಜೆಡಿಎಸ್‌ನಿಂದ ಅಮಾನತುಗೊಂಡಿರುವ ಏಳು ಶಾಸಕರು ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ
ಕೊಡಲಿ. ಆನಂತರ ಯಾವ ಪಕ್ಷ ಬೇಕಾದರೂ ಸೇರಲಿ’ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸವಾಲು
ಹಾಕಿದರು.

Advertisement

“ಚಾಮರಾಜಪೇಟೆಯಲ್ಲಿ ಜೆಡಿಎಸ್‌ ಗೆದ್ದರೆ ರುಂಡ ಕತ್ತರಿಸಿ ಕೊಡುವೆ’ ಎಂದು ಹೇಳಿರುವ ಜಮೀರ್‌ ಅಹಮದ್‌ ಅವರ ರುಂಡ ತಗೊಂಡು ನಾವೇನು ಮಾಡೋಣ? ಅವರಿಗೆ ನೈತಿಕತೆ ಇದ್ದರೆ ಜೆಡಿಎಸ್‌ನಿಂದ ಗೆದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಾತನಾಡಲಿ ಕಾಂಗ್ರೆಸ್‌ನಲ್ಲಿದ್ದಾಗ ಶಾಸಕನಾಗಲೂ ಆಗದಿದ್ದ ಜಮೀರ್‌ ಅಹಮ್ಮದ್‌ ಅವರನ್ನು ಶಾಸಕರನ್ನಾಗಿ ಮಾಡಲು ಎಚ್‌ .ಡಿ.ದೇವೇಗೌಡರು ಬರಬೇಕಿತ್ತಾ ಎಂದು ಪ್ರಶ್ನಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿರಾಮಮೂರ್ತಿ  ಅವರಿಗೆ ಜೆಡಿಎಸ್‌ ಬಂಡಾಯ ಶಾಸಕರು ಪುಕ್ಕಟೆ ವೋಟು ಹಾಕಿದ್ದಾರಾ? ಅಂದು ಚುನಾವಣೆಯಲ್ಲಿ ನಾನೇ ಏಜೆಂಟ್‌ ಆಗಿದ್ದೆ ಎಂದು ನೆನಪಿಸಿದ ರೇವಣ್ಣ, ರಾಜ್ಯಸಭಾ ಚುನಾವಣೆಯಲ್ಲಿ ಏನೇನು ಆಗಿದೆ, ಯಾರ್ಯಾರು ಹಣ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದೂ ಒತ್ತಾಯಿಸಿದರು

Advertisement

Udayavani is now on Telegram. Click here to join our channel and stay updated with the latest news.

Next