Advertisement

ಮಂತ್ರಾಲಯಕ್ಕೆ ಬರಬೇಡಿ: ಸುಬುಧೇಂದ್ರ ಶ್ರೀ ಮನವಿ

12:59 AM Mar 21, 2020 | Team Udayavani |

ರಾಯಚೂರು: ಕೊರೊನಾ ಹಿನ್ನೆಲೆಯಲ್ಲಿ ಕೇವಲ ವಿದೇಶಿ ಭಕ್ತರಿಗಷ್ಟೇ ದರ್ಶನಕ್ಕೆ ನಿಷೇಧ ಹೇರಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿ, ಈಗ ಎಲ್ಲ ಭಕ್ತರಿಗೂ ನಿಷೇಧ ಹೇರಿದೆ. ಕೊರೊನಾ ವೈರಸ್‌ ದಿನೇ ದಿನೆ ಆತಂಕ ಸೃಷ್ಟಿಸುತ್ತಿದೆ.

Advertisement

ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಿದ್ದು, ಯಾವುದೇ ಕಾರಣಕ್ಕೂ ಭಕ್ತರು ರಾಯರ ದರ್ಶನಕ್ಕೆ ಬರುವುದು ಬೇಡ. ಪರಿಸ್ಥಿತಿ ತಿಳಿಯಾದ ಬಳಿಕ ಮಠ ಪ್ರಕಟಣೆ ನೀಡಿ ತಿಳಿಸಲಿದೆ. ಭಕ್ತರು ರೋಗ ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next